ಸಿ.ಕೆ. ಎಂಟರ್ಟೈನ್ಮೆಂಟ್ ಪ್ರೈ. ಲಿಮಿಟೆಡ್ ಅರ್ಪಿಸುವ ತೇಜು ಸಿನಿಮಾ ಲಾಂಛನದಲ್ಲಿ ಶ್ರೀ ಕಲ್ಯಾಣ್ ನಿರ್ಮಾಣದ ಹೆಚ್.ವಾಸು ನಿರ್ದೇಶನ ವಿರಾಟ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಕೋನೇರು ಕಲ್ಪನ ಸಹನಿರ್ಮಾಪಕರಾಗಿರುವ ಈ ಚಿತ್ರದ ಕಥೆ ಸಂಭಾಷಣೆ- ಎಂ.ಎಸ್. ರಮೇಶ್, ಛಾಯಾಗ್ರಹಣ - ಎ.ವಿ.ಕೃಷ್ಣಕುಮಾರ್, (ಕೆ.ಕೆ) ಸಂಗೀತ - ವಿ. ಹರಿಕೃಷ್ಣ, ಸಂಕಲನ - ಕೆ.ಎಂ. ಪ್ರಕಾಶ್, ಸಾಹಸ - ರವಿವರ್ಮ, ಪಳನಿರಾಜ್, ರಾಮ್ ಲಕ್ಷ್ಮಣ್ (ಹೈದರಾಬಾದ್), ಗಣೇಶ್ (ಚೆನ್ನೈ) ಕಲೆ- ಈಶ್ವರಿ ಕುಮಾರ್, ನೃತ್ಯ - ಕಲೈ, ಗಣೇಶ್ (ಹೈದರಾಬಾದ್), ಮುರಳಿ ನಿರ್ದೇಶನ- ಎಂ.ಹೆಚ್. ಲಿಂಗರಾಜು, ಶಶಿಕಾಂತ್, ಮೇಲ್ವಿಚಾರಣೆ-ಅಕ್ಷಯ್, ಗಂಗಾಧರ್, ನಿರ್ವಹಣೆ - ಎನ್.ಎ. ಸುಂದರ್ ರಾಜ್, ಗಗನ ಮೂರ್ತಿ, ತಾರಾಗಣದಲ್ಲಿ -ಚಾಲೆಂಜಿಂಗ್ ಸ್ಟಾರ್ ದರ್ಶನ್, ಚೈತ್ರ ಚಂದ್ರನಾಥ್, ಇಷಾ ಚಾವ್ಲಾ, ವಿಧಿಶಾ ಶ್ರೀವಾತ್ಸವ್, ಸುಹಾಸಿನಿ, ರವಿಶಂಕರ್, ಸಾದು ಕೋಕಿಲ, ಬುಲೆಟ್ ಪ್ರಕಾಶ್, ಬ್ಯಾಂಕ್ ಜನಾರ್ಧನ್, ಸುಮಲತಾ ಅಂಬರೀಶ್, ಪದ್ಮಾವಾಸಂತಿ, ತುಳಸಿ ಶಿವಮಣಿ, ಚಿತ್ರಾ ಶಣೈ,ಚೇತನ್ ಪಾಪಪಾಂಡು ಚಿದಾನಂದ್ ಮುಂತಾದವರಿದ್ದಾರೆ.