ತಮ್ಮ ಮಕ್ಕಳ ವಿಷಯದಲ್ಲಿ ಪೋಷಕರಾದವರ ಜವಾಬ್ದಾರಿ ಮಕ್ಕಳ ಕರ್ತವ್ಯದ ಮೇಲೆ ಬೆಳಕು ಚೆಲುವಂತಹ ಕಥೆ ಹೊಂದಿರುವ ಚಿತ್ರ ‘ಫಲಿತಾಂಶ’ದಲ್ಲಿ ಕನ್ನಡ ಚಿತ್ರರಂಗದ ಸಪ್ತಗಾಯಕಿಯರು ಅಭಿನಯಿಸಿದ್ದಾರೆ. ನೃತ್ಯ ನಿರ್ದೇಶಕ ಎಂ.ಆರ್. ಕಪಿಲ್ರವರು ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಫಲಿತಾಂಶ ಚಿತ್ರದಲ್ಲಿ ಕನ್ನಡದ ಪ್ರಸಿದ್ದ ಗಾಯಕಿಯರಾದ ಬಿ.ಕೆ.ಸುಮಿತ್ರ, ಹಿಂದೂ ವಿಶ್ವನಾಥ್, ರಮಾ ಅರವಿಂದ್, ಮಾನಸ ಹೊಳ್ಳ, ಸುರೇಖ, ಪ್ರಾರ್ಥನಾ, ವೀಣಾಸುಮರಾಣಿ ಹೀಗೆ ೭ ಜನರು ಅಆಇಈ ಅಕ್ಷರಮಾಲೆ ಬಾಳಿಗೆ ಬೆಕನೆ ವಿದ್ಯೆಯೆನ್ನುವ ಮಕ್ಕಳಿಗೆ ಭೋದನೆ ನೀಡಲು” ಹಾಡಿನಲ್ಲಿ ಅಭಿನಯಿಸಿದ್ದಾರೆ. ಪುಟ್ಟಣ್ಣ ಸ್ಟುಡಿಯೋದಲ್ಲಿ ಇತ್ತೀಚೆಗೆ ಈ ಹಾಡನ್ನು ಚಿತ್ರೀಕರಿಸಿಕೊಳ್ಳಲಾಯಿತು ಈ ಹಾಡಿನೊಂದಿಗೆ ೯೦ ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ.
ಕೆ.ಎಫ್.ಸಿ. ಪ್ರೋಡಕ್ಷನ್ ಸಂಸ್ಥೆಯಲ್ಲಿ ಪಿ.ಕಿಶೋರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಘ ರಮಣ ಸಂಗೀತ, ಪ್ರಸನ್ನ ಛಾಯಾಗ್ರಹಣ, ಸುಶೀಲ್ ಬಾಬು ಚಿತ್ರಕಥೆ ಮತ್ತು ಸಂಭಾಷಣೆ, ಶ್ರೀ ಜೌಳಿ ಸಂಕಲನ, ಡಾ.ದೊಡ್ಡರಂಗೇಗೌಡ, ಡಾ.ಭರತ್ ದೊಡ್ಡರಂಗೇಗೌಡ, ಉದಯಲೇಖ ಸಾಹಿತ್ಯವಿದೆ. ಜೈಜಗದೀಶ್, ವಿಕ್ಟರಿ ವಾಸು, ಗುಬ್ಬಿ ನಟರಾಜ್, ಭಾಗ್ಯಶ್ರೀ, ಸುಶೀಲ್ ಬಾಬು, ಶಂಕರ್ ಭಟ್, ರಾಮು ಕಣಗಾಲ್, ಗೀರಿಶ್, ದೀಪ್ತಿ, ಉಮಾಶಂಕರ್, ಅಪೂರ್ವ, ಮೀನಾಕ್ಷಿ, ಮಂಜುಳ, ಸುಚೇಂದ್ರ ಪ್ರಸಾದ್, ಕು.ಸೌಂದರ್ಯ, ಕೃಷ್ಣವೇಣಿ, ಪೂಜಾ, ಮಾ.ಭರತ್, ಮಾ.ತೇಜಸ್, ಮಾ.ಹೇಮಂತ್, ಮುಂತಾದವರ ತಾರಾಬಳಗವಿದೆ.