ರಾಕ್ಲೈನ್ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋ ಮೂಲಕ ರಾಕ್ಲೈನ್ ವೆಂಕಟೇಶ್ ಹಾಗೂ ಆಕಾಶ್ ಚಾವ್ಲಾ ಅವರು ನಿರ್ಮಿಸುತ್ತಿರುವ ಹಾಗೂ ಎಸ್.ನಾರಾಯಣ್ ನಿರ್ದೇಶನದ ‘ಮನಸು ಮಲ್ಲಿಗೆ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ಮುಕ್ತಾಯವಾಗಿದೆ. ಫ಼ೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಮರಾಠಿ ಭಾಷೆಯ ‘ಸೈರಾಟ್‘ ಚಿತ್ರದ ರಿಮೇಕ್ ಆಗಿರುವ ‘ಮನಸು ಮಲ್ಲಿಗೆ‘ ಚಿತ್ರದ ನಾಯಕ, ನಾಯಕಿಯಾಗಿ ನಿಶಾಂತ್ ಹಾಗೂ ರಿಂಕು ರಾಜಗುರು ಅಭಿನಯಿಸಿದ್ದಾರೆ. ಸಾಕಷ್ಟು ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಹೊಸಪೇಟೆ, ಗದಗ್, ಕೊಳ್ಳೇಗಾಲ, ಚಾಮರಾಜನಗರ ಮುಂತಾದ ಪ್ರದೇಶಗಳಲ್ಲಿ ಸುಮಾರು ಮೂವತ್ತು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ.
ಅದ್ದೂರಿ ಚಿತ್ರಗಳ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಾಕ್ಲೈನ್ ವೆಂಕಟೇಶ್ ಮತ್ತು ಎಸ್ ನಾರಾಯಣ್ ಸಮಾಗಮದ ಮನಸು ಮಲ್ಲಿಗೆ ಚಿತ್ರಕ್ಕೆ ಶ್ರೀಕಾಂತ್ ಸಂಕಲನ, ಮನೋಹರ ಜೋಷಿ ಛಾಯಾಗ್ರಹಣ, ಇಸ್ಮಾಯಿಲ್ ಕಲಾ ನಿರ್ದೇಶನ, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ಯೋಗರಾಜ ಭಟ್, ಕವಿರಾಜ್ ಅವರುಗಳ ಗೀತ ಸಾಹಿತ್ಯ, ಚೆನ್ನಾರೆಡ್ಡಿ ಇಟಗಿ ಸಹ ನಿರ್ದೇಶನ ಮತ್ತು ಮೈಸೂರು ರಾಜು ಅವರ ನಿರ್ಮಾಣ ನಿರ್ವಹಣೆ ಇದೆ.