ಈ ವಾರ ತೆರೆಗೆ ‘ಅಲ್ಲಮ’
Posted date: 25 Wed, Jan 2017 – 10:31:55 AM

ಯಜಮಾನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಹರಿ ಎಲ್ ಖೋಡೆ ಅವರು ನಿರ್ಮಿಸಿರುವ ‘ಅಲ್ಲಮ‘ ಚಿತ್ರ ಈ ವಾರ(ಜನವರಿ ೨೬)  ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 ಧನಂಜಯ್ ಮತ್ತು ಮೇಘನಾರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರವನ್ನು ಟಿ.ಎಸ್.ನಾಗಾಭರಣ ನಿರ್ದೇಶಿಸಿದ್ದಾರೆ.  ಅಲ್ಲಮ-ಬಯಲು ಬೆರಗು ಎಂಬ ಶೀರ್ಷಿಕೆಯೇ ಇದೊಂದು ಐತಿಹಾಸಿಕ ಚಿತ್ರ ಎಂಬುದನ್ನು ಸಾರುತ್ತದೆ. ಈ ಚಿತ್ರದಲ್ಲಿ ಧನಂಜಯ್ ಅವರು ಅಲ್ಲಮನಾಗಿ ಸವಾಲಿನ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಈ ಪಾತ್ರಕ್ಕಾಗಿಯೇ ಮೃದಂಗ, ಯೋಗಾಸನ ಮುಂತಾದವುಗಳನ್ನು ಕಲಿತುಕೊಂಡಿರುವ ಧನಂಜಯ್ ಚೆಂದದ ನಟನೆ ನೀಡಿದ್ದಾರೆಂಬ ಮೆಚ್ಚುಗೆ ಈಗಾಗಲೇ ಕೇಳಿ ಬರುತ್ತಿದೆ.
ಈ ಚಿತ್ರ ತುಂಬಾ ಕುತೂಹಲ ಕೆರಳಿಸಲು ಮೂಲ ಕಾರಣ ನಿರ್ದೇಶಕರಾದ ನಾಗಾಭರಣ. ಈವರೆಗೂ ಕನ್ನಡಿಗರನ್ನು ಸದಾ ಕಾಡುವ, ನೆನಪಿನಲ್ಲುಳಿಯುವಂಥಾ ಅನೇಕ ಚಿತ್ರಗಳನ್ನು ಕೊಟ್ಟಿರುವ ನಾಗಾಭರಣ ಅವರ ‘ಅಲ್ಲಮ‘ ಚಿತ್ರ ಸಾಕಷ್ಟು ನಿರೀಕ್ಷೆಗಳಿಗೆ ಕಾರಣವಾಗಿದೆ.
   ಬಾಪು ಪದ್ಮನಾಭ ಅವರು ಸಂಗೀತ ನೀಡಿರುವ ಈ ಚಿತ್ರಕ್ಕೆ ಜಿ.ಎಸ್.ಭಾಸ್ಕರ್ ಅವರ ಛಾಯಾಗ್ರಹಣವಿದೆ. ಬಿ.ಎಸ್.ಕೆಂಪರಾಜ್ ಸಂಕಲನ, ಪನ್ನಗ ಭರಣ ಸಹ ನಿರ್ದೇಶನ, ನಿರ್ಮಾಣ ವಿನ್ಯಾಸ, ನಾಗಿಣಿ ಭರಣ ವಸ್ತ್ರ ವಿನ್ಯಾಸ, ಮದನ್ - ಹರಿಣಿ, ಚಾಮರಾಜ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ಶಶಿಧರ ಅಡಪರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಧನಂಜಯ್, ಮೇಘನರಾಜ್, ತೌಶಿರ್, ಲಕ್ಷ್ಮೀ ಗೋಪಾಲಸ್ವಾಮಿ, ಸಂಚಾರಿ ವಿಜಯ್, ರಾಮಕೃಷ್ಣ, ಆಶಾಲತ, ಶೃತ ಭರಣ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed