``ಪರಂವಃ``ಚಿತ್ರತಂಡವು `ಕಾಂತಾರ ಶಿವ`ನಲ್ಲಿಗೆ ತೆರಳಿತ್ತು ಚಿತ್ರ ಜುಲೈ 21 ಶುಕ್ರವಾರ ತೆರೆಕಾಣಲಿದೆ
Posted date: 18 Tue, Jul 2023 09:56:41 PM
ಆ ವೀರಭದ್ರನ ದಯೆಯಿಂದ ಬಿಡುಗಡೆಗೆ ಸಿದ್ದವಾಗಿರೊ "ಪರಂವಃ" ಚಿತ್ರತಂಡವು `ಕಾಂತಾರ ಶಿವ`ನಲ್ಲಿಗೆ ತೆರಳಿತ್ತು..
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಏಷ್ಯಾದ ಎರಡನೇ ಅತಿದೊಡ್ಡ ಕರಡಿಧಾಮವಾದ 
ಗುಡೇಕೋಟೆಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಸಹಭಾಗಿತ್ವದಲ್ಲಿ ನಡೆದ  ವನ್ಯಜೀವಿ ಸಂರಕ್ಷಣಾ ಅಭಿಯಾನ ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಿಷಭ್ ಶೆಟ್ಟಿಯವರನ್ನು ನಮ್ಮ ಚಿತ್ರತಂಡ ಭೇಟಿಯಾಗಿತ್ತು.ನಮ್ಮ ಚಲನಚಿತ್ರದ ಬಗ್ಗೆ ತಿಳಿದ ಅವರು ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಹಾರೈಸಿದರು..

ನಿರೂಪಕರಾದ ಅಜಿತ್ ಹನುಮಕ್ಕನವರ್,ಬರಹಗಾರರಾದ ಜೋಗಿ,ಡಿಎಫ್ಒ,ಎಎಫ್ಒ,ರೇಂಜ್ ಆಫಿಸರ್ಸ್,ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು,ಪೊಲೀಸ್ ಇಲಾಖೆಯವರು ಸೇರಿದಂತೆ ಗುಡೇಕೋಟೆಯ ಸಮಸ್ತ ಗ್ರಾಮಸ್ಥರು ನಮ್ಮ ಈ ಪ್ರಯತ್ನಕ್ಕೆ ಶುಭಕೋರಿದರು.
ಜುಲೈ 21 ಶುಕ್ರವಾರ ತೆರೆಕಾಣಲಿರೊ "ಪರಂವಃ" ಚಲನಚಿತ್ರದ ಕುರಿತು ವೇದಿಕೆಯಲ್ಲಿ ಪ್ರೀತಿಯಿಂದ ಮಾತನಾಡಿ,ಹೊಸಬರ ತಂಡವನ್ನು ಪ್ರೋತ್ಸಾಹಿಸಿದ ಮಾನ್ಯ ಕೂಡ್ಲಿಗಿ ಶಾಸಕರಾದ ಡಾ.ಶ್ರೀನಿವಾಸ್ ಹಾಗೂ ಅವರ ಧರ್ಮಪತ್ನಿ ಡಾ.ಪುಷ್ಪರವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು..

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed