``ಡಿಯರ್ ಕಣ್ಮಣಿ``ಗೆ ಕಿಚ್ಚ ಸುದೀಪ್ ಸಾಥ್
Posted date: 17 Wed, Feb 2021 01:22:17 PM

ಚಂದನವನದ ಕಣ್ಮಣಿ ಕಿಚ್ಚ ಸುದೀಪ್ ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ (ಫೆ.15) ವಿಸ್ಮಯ ಫಿಲ್ಮ್ಸ್‌ನ ಹೊಸ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು. ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ಅನ್ನು ಕೂಡ ಕಿಚ್ಚ ಸುದೀಪ್ ಅನಾವರಣಗೊಳಿಸಿದರು.  `ಡಿಯರ್ ಕಣ್ಮಣಿ` ಚಿತ್ರದ ಮೂಲಕ ಚಂದನವನಕ್ಕೆ ನಿರ್ದೇಶಕಿಯೊಬ್ಬರು ಪರಿಚಿತರಾಗಿದ್ದಾರೆ. ವಿಸ್ಮಯಾ ಗೌಡ ಈ ಚಿತ್ರಕ್ಕೆ ನಿರ್ಮಾಣ ಹಾಗೂ ನಿರ್ದೇಶನ ಮಾಡಲಿದ್ದಾರೆ.

ಬಿಗ್‍ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಅವರು ಲವರ್ ಬಾಯ್ ಪಾತ್ರದ ಮೂಲಕ ಈ ಸಿನಿಮಾದಲ್ಲಿ ನಾಯಕ ನಟರಾಗಿ ಮಿಂಚಲಿದ್ದಾರೆ. ಕಿಶನ್ ಜೊತೆಗೆ ಕ್ರಿಕೆಟರ್ ಪ್ರವೀಣ್ ಕೂಡ ಮೊದಲ ಬಾರಿಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಹಿರಿಯ ನಟಿ ರೇಖಾದಾಸ್ ಅವರ ಮಗಳು ಸಾತ್ವಿಕಾ ಈ ಸಿನಿಮಾದ ನಾಯಕಿ.

ಸುದೀಪ್ ಬೆಂಬಲ
ಸಿನಿಮಾಕ್ಕೆ ಚಾಲನೆ ನೀಡಿದ ಬಳಿಕ ಕಿಚ್ಚ ಸುದೀಪ್ ಶೀರ್ಷಿಕೆಯನ್ನೂ ಬಿಡುಗಡೆಗೊಳಿಸಿದರು. `ಈ ಸಿನಿಮಾದಲ್ಲಿ ಪ್ರವೀಣ್ ಗೌಡ ನಟನೆ ಮಾಡುತ್ತಿದ್ದಾರೆ. ಅವರಿಗೋಸ್ಕರ ನಾನು ಈ ಕಾರ್ಯಕ್ರಮಕ್ಕೆ ಬಂದೆ. ವಿಸ್ಮಯಾ ಹಾಗೂ ಅವರ ತಂಡ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಖಂಡಿತಾ ನಾನು ಇಲ್ಲಿ ಯಾರಿಗೂ ನನ್ನ ಅನುಭವ ಹೇಳಿ ಮಾರ್ಗದರ್ಶನ ಮಾಡುವ ಉದ್ದೇಶದಿಂದ ಬಂದಿಲ್ಲ. ಅವರು ಸರಿ-ತಪ್ಪುಗಳ ಜೊತೆಗೆ ಸ್ವಂತ ಅನುಭವದಿಂದ ಒಳ್ಳೆಯ ಸಿನಿಮಾ ಮಾಡಲಿ ಎಂದು ಹಾರೈಸುತ್ತೇನೆ` ಎಂದು ಸುದೀಪ್ ಹೇಳಿದರು.

ವಿಸ್ಮಯಾ ಗೌಡ ಮಾತನಾಡಿ, `ಮಡಿಕೇರಿ ಹಾಗೂ ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ. ``ಲವ್`` ಜಾನರ್ ಸಿನಿಮಾ ಇದು. ಮೂವರು ಇದ್ದ ಮಾತ್ರಕ್ಕೆ ಇದು ತ್ರಿಕೋನ ಪ್ರೇಮ ಕಥೆ ಎಂದುಕೊಳ್ಳಬೇಕಿಲ್ಲ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್. ತುಂಬಾ ಚೆಂದದ ಕಥೆ ಈ ಸಿನಿಮಾಕ್ಕಿದೆ. ನಾವೆಲ್ಲರೂ ಸ್ನೇಹಿತರೇ ಆದರೂ ಸ್ಕ್ರಿಪ್ಟ್ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇವೆ` ಎಂದರು.

ನಟ ಕಿಶನ್ ಮಾತನಾಡಿ, ``ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ. ಲವರ್ ಬಾಯ್ ಪಾತ್ರ ನನಗೆ ಹೊಂದುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಇದನ್ನು ತೆರೆಮೇಲೆ ಸಾಧ್ಯವಾಗಿಸಬೇಕಿದೆ` ಎಂದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed