ಭಾಗ್ಯಲಕ್ಷ್ಮೀ ಪ್ರೊಡಕ್ಷನ್ ಲಾಂಛನದಲ್ಲಿ ಶಿವಕುಮಾರ್ ಕೆ, ಮಧುಸೂದನ್ ಎ.ಎಸ್ ಮತ್ತು ಪ್ರಶಾಂತ್ ಕೊಡಗೆದಾರ್ ಅವರು ನಿರ್ಮಿಸಿರುವ ‘ಅಭಿಸಾರಿಕೆ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಮಧುಸೂದನ್ ಎ.ಎಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಕರುಣ್ ಬಿ ಕೃಪ ಸಂಗೀತ ನೀಡಿದ್ದಾರೆ. ವೇಲುಮುರುಗನ್ ಮತ್ತು ಬೆನಕರಾಜು ಛಾಯಾಗ್ರಹಣ, ಲಿಂಗರಾಜು ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ ಹಾಗೂ ಪ್ರಭುಶ್ರೀನಿವಾಸ್, ರಘು ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸೋನಾಲ್ ಮಾಂಟೆರೊ, ತೇಜ್, ಯಶ್ವಂತ್ ಶೆಟ್ಟಿ, ಅಶೋಕ್, ರಚನ, ಚಂದ್ರಕಲಾ ಮೋಹನ್, ಶಾಲಿನಿ(ಬಿಗ್ಬಾಸ್) ಮುಂತಾದವರಿದ್ದಾರೆ.