ಹಿರಿಯ ತಂತ್ರಜ್ಞ ವಿ ಉಮಾಕಾಂತ್ ಅವರು ಬಹಳ ವರ್ಷಗಳ ಬಳಿಕೆ ನಿರ್ದೇಶನಕ್ಕೆ ವಾಪಸ್ಸಾಗುತ್ತಿದ್ದಾರೆ. ಪ್ರೀತಿ, ಪ್ರೇಮ, ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾ ನೀಡಿದ ವಿ ಉಮಾಕಾಂತ್ ಮೊದಲ ಬಾರಿ ಒಂದು ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೊಂದು ನಿಜ ಜೀವನದಲ್ಲಿ ನಡೆದ ಘಟನೆ ಆಧಾರಿತ ಸಿನಿಮಾ. ನಿರ್ಮಾಪಕ ಹಾಗೂ ನಟ ಕೃಷ್ಣೆ ಗೌಡ ಸಪ್ತಗಿರಿ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.
ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನೇಕ ವರ್ಷಗಳ ನಂತರ ಕೃಷ್ಣೆ ಗೌಡ ಅವರು ಬಣ್ಣ ಹಚ್ಚುತ್ತಿದ್ದಾರೆ. ಇವರ ಪಾತ್ರವೆ ಈ ಚಿತ್ರದ ವೈಶಿಷ್ಟ್ಯಗಳಲ್ಲಿ ಒಂದು, ವೈಷ್ಣವಿ, ರಂಜಿತ ರಾವ್, ಸುಂದರ್ ವೀಣ, ಸ್ನೇಹಪ್ರಿಯಾ ನಾಗರಾಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ. ಎ ಟಿ ರವೀಶ್ ಸಂಗೀತ ನೀಡಿದ್ದಾರೆ. ಎಂ ಆರ್ ಸೀನು ಛಾಯಾಗ್ರಹಣ, ಬಿ ಎಸ್ ಸೋಮಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ.