ಕೆ ಆರ್ ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ರವಿಕುಮಾರ್ ಹಾಗೂ ಅಶೋಕ್ ಶಿರಾಲಿ ನಿರ್ಮಿಸಿರುವ `ಕೊಡೆಮುರುಗ` ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸುಬ್ರಹ್ಮಣ್ಯ ಪ್ರಸಾದ್ ಕಥೆ, ಚಿತ್ರಕಥೆ, ಗೀತರಚನೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎಂ.ಎಸ್.ತ್ಯಾಗರಾಜ ಸಂಗೀತ ನೀಡಿದ್ದಾರೆ. ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಹಾಗೂ ಸಿ.ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ.
ಮುನಿಕಷ್ಣ ಹಾಗೂ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಪಲ್ಲವಿ ಗೌಡ, ದತ್ತಣ್ಣ, ಕುರಿ ಪ್ರತಾಪ್, ಅರವಿಂದ್ ರಾವ್, ಕಾಮಿನಿಧರನ್, ಸ್ವಾತಿ, ರಾಕ್ ಲೈನ್ ಸುಧಾಕರ್, ಕಡ್ಡಿಪುಡಿ ಚಂದ್ರು, ಗೋವಿಂದೇ ಗೌಡ, ಮೋಹನ್ ತುಮಕೂರು, ಮೋಹನ್ ಜುನೇಜ ಮುಂತಾದವರಿದ್ದಾರೆ