`ಖನನ` ನಾಳೆಯಿಂದ ಬಿಡುಗಡೆ
Posted date: 09 Thu, May 2019 – 09:51:34 AM

ಸಸ್ಪೆನ್ಸ್ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಚಿತ್ರ ‘ಖನನ’ ನಾಳೆಯಿಂದ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಎಸ್ ನಲಿಗೆ ಪ್ರೊಡಕ್ಷನ್ ಅಡಿಯಲ್ಲಿ ಶ್ರೀನಿವಾಸ ರಾವ್ ಪ್ರಥಮ ನಿರ್ಮಿಸಿ, ರಾಧ ಅವರ ನಿರ್ದೇಶನದ ಮೊದಲ ಚಿತ್ರವಾದ ಖನನಕ್ಕೆ ನಿರ್ದೇಶಕರೇ ಚಿತ್ರಕಥೆ ಹಾಗೂ ಸಂಭಾಷಣೆ ಸಹ ಬರೆದಿದ್ದಾರೆ. ರವಿಕಾಂತ್ ಜಿ ಈ ಚಿತ್ರಕ್ಕೆ ಕಥೆ ರಚಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರು ಬಹಳ ವರ್ಷಗಳಿಂದ ಕನ್ನಡ ಚಿತ್ರಗಳ ಚಿತ್ರೀಕರಣ ಉಪಕರಣಗಳನ್ನು ಒದಗಿಸುತ್ತಾ ಬಂದಿರುವ ಉದಮಿ.
ಪ್ರೀತಿ, ವಿಶ್ವಾಸ, ನಂಬಿಕೆ, ಸ್ವಾತಂತ್ರ್ಯದ ವಿಚಾರಗಳನ್ನು ಹೊಂದಿರುವ ಐದು ವಿಭಿನ್ನ ಶೇಡ್‌ಗಳಲ್ಲಿ ನಟಿಸುವ ಮೂಲಕ ಆರ್ಯವರ್ಧನ ನಾಯಕನಟನಾಗಿ ಪರಿಚಯವಾಗುತ್ತಿದ್ದಾರೆ. ಈ ಹಿಂದೆ ಇವರು ‘ಮಾರ್ಚ್ ೨೨’ ಸಿನಿಮಾದಲ್ಲಿ ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
ರಮೇಶ್ ತಿರುಪತಿ ಛಾಯಾಗ್ರಹಣ, ನಳಿನ್ ಬಾಡೆ ಸಂಕಲನ, ಕುನ್ನಿ ಗುಡಿಪಾಟಿ ಸಂಗೀತ, ಜೋಯ್ ಮ್ಯಾಥ್ಯೂ, ಬಾಬಿ ಹಾಗೂ ರಾಜೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಆರ್ಯವರ್ಧನ ಜೊತೆ ನಾಯಕಿ ಆಗಿ ಕರಿಷ್ಮ ಬರುವ, ಈ ಚಿತ್ರದಲ್ಲಿ ನಾಯಿಯೊಂದು ಪ್ರಮುಖ ಪಾತ್ರ ವಹಿಸಿದೆ. ಖಳ ನಟ ಆಗಿ ಯುವ ಕಿಶೋರ್ ಪರಿಚಯ ಆಗುತ್ತಿದ್ದಾರೆ. ಅವಿನಾಷ್, ಓಂ ಪ್ರಕಾಷ್ ರಾವ್, ಬ್ಯಾಂಕ್ ಜನಾರ್ಧನ್, ಶ್ರೀನಿವಾಸ ರಾವ್, ವಿನಯಾ ಪ್ರಕಾಷ್, ಮೋಹ ಜುನೇಜ, ಮಹೇಶ್ ಸಿದ್ದು, ಹೊನ್ನವಳ್ಳಿ ಕೃಷ್ಣ, ಕೆಂಪೆ ಗೌಡ, ಆಶಿಶ್ ಜಾ ಹಾಗೂ ಇತರರು ತಾರಗಣದಲ್ಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed