`ಪ್ಯಾಟೇ ಹುಡ್ಗೀರು ಕಾಡಿಗೆ ಬಂದ್ರು` ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 07 Mon, May 2012 ? 08:10:30 AM

ಸಿಮ್ರಾನ್ ಮೂವೀ ಮೇಕರ್ಸ್ ಲಾಂಛನದಲ್ಲಿ ಫ಼ಿರ್ದೋಸ್ ಅವರು ನಿರ್ಮಿಸುತ್ತಿರುವ ‘ಪ್ಯಾಟೇ ಹುಡ್ಗೀರು ಕಾಡಿಗೆ ಬಂದ್ರು‘ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
 ಜಯಸಿಂಹ ಮುಸುರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಕಾರವಾರದಲ್ಲಿ ಇಪ್ಪತ್ತೈದು ದಿನಗಳ ಚಿತ್ರೀಕರಣ ನಡೆಯಲಿದೆ.
ಖ್ಯಾತ ನಟ  ಜಾಕಿಶ್ರಾಫ಼್ ಚಿತ್ರದ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಿಲಕ್, ಮನದೀಪ್‌ರಾಯ್, ರವೀಂದ್ರನಾಥ್, ಜೆಸಿಕಾ, ಅನುಜೆಂಟ್, ಊರ್ವಶಿ, ಅಲಿಷಾ ಮುಂತಾದವರ ತಾರಾಬಳಗ ಚಿತ್ರಕ್ಕಿದೆ.
ಗುರುದತ್‌ಮುಸುರಿ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ರಾಜಭಾಸ್ಕರ್ ಸಂಗೀತ ನೀಡಿದ್ದಾರೆ. ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ಸಂಕಲಕಾರರಾಗಿ ರಾಜಶೇಖರ ರೆಡ್ಡಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed