ವೃಷಭಾದ್ರಿ ಪ್ರೋಡಕ್ಷನ್ಸ್ ಲಾಂಚನದಡಿಯಲ್ಲಿ ನಿರ್ಮಾಪಕ ಮುನಿರತ್ನ ನಿರ್ಮಿಸುತ್ತಿರುವ ಅದ್ದೂರಿ ಪೌರಾಣಿಕ"ಮುನಿರತ್ ನಕುರುಕ್ಷೇತ್ರ" 3D ಚಿತ್ರವು ನಾಳೆಯಿಂದ 9 ರಂದು ವರಮಹಾಲಕ್ಷ್ಮೀ ಹಬ್ಬದ ಕೊಡುಗೆಯಾಗಿ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ.
ಚಿತ್ರಕ್ಕೆ ಮುನಿರತ್ನಕಥೆ,ಜಿ.ಕೆ. ಭಾರವಿ ಸಂಭಾಷಣೆ, ಜಯನ್ ವಿನ್ಸೆಂಟ್ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ, ಶಿವಶಂಕರ್, ಕಲೈ ನೃತ್ಯ, ಕಿರಣ್ಕುಮಾರ್ ಕಲೆ, ಕಣಲ್ಕಣ್ಣನ್, ಕಿಂಗ್ ಸಾಲೋಮನ್, ವಿನೋದ್, ಶಿವ ಸಾಹಸ, ಜೋನಿಹರ್ಷ ಸಂಕಲನವಿದ್ದು, ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ.
ತಾರಾಗಣದಲ್ಲಿ ದರ್ಶನ್ (ದುರ್ಯೋಧನ) ಅರ್ಜುನ್ ಸರ್ಜಾ (ಕರ್ಣ) ಅಂಬರೀಶ್ (ಭೀಷ್ಮ) ರವಿಚಂದ್ರನ್ (ಕೃಷ್ಣ) ಶಶಿಕುಮಾರ್ (ಧರ್ಮರಾಯ) ಡ್ಯಾನಿಶ್ ಅಖ್ತರ್ (ಭೀಮ) ಸೋನುಸೂದ್ (ಅರ್ಜುನ) ಯಶಸ್ಸೂರ್ಯ (ನಕುಲ) ಚಂದನ್ (ಸಹದೇವ) ನಿಖಿಲ್ ಕುಮಾರಸ್ವಾಮಿ (ಅಭಿಮನ್ಯು) ರವಿಶಂಕರ್ (ಶಕುನಿ) ಭಾರತಿ (ಕುಂತಿ) ಸ್ನೇಹಾ (ದ್ರೌಪದಿ) ರಾಕ್ಲೈನ್ ವೆಂಕಟೇಶ್ (ಶಲ್ಯ) ರಮೇಶ್ಭಟ್ (ವಿದುರ) ಶ್ರೀನಿವಾಸಮೂರ್ತಿ (ದ್ರೋಣಾಚಾರ್ಯ) ಶ್ರೀನಾಥ್ (ದೃತರಾಷ್ಟ್ರ) ರವಿಚೇತನ್ (ದುಶ್ಯಾಸನ) ಅವಿನಾಶ್ (ಗಂಗಾಧರರಾಜ) ಪವಿತ್ರ ಲೋಕೇಶ್ (ಸುಭದ್ರಾ) ಹರಿಪ್ರಿಯಾ ಮುಂತಾದವರಿದ್ದಾರೆ.