ಆಗಸ್ಟ್ 4 ರಂದು ‘ಬೆಂಕಿಯ ಬಲೆ ಚಿತ್ರದ ಆಡಿಯೋ ಹಾಗೂ ವಿಡಿಯೋ ಸಾಂಗ್ ರಿಲೀಸ್
Posted date: 02 Thu, Aug 2018 – 09:09:36 AM

 ಶಿವಾಜಿ ಪಿಕ್ಚರ್ಸ್ ಲಾಂಛನದಲ್ಲಿ ಶಿವಾಜಿ ಅವರು ನಿರ್ಮಿಸುತ್ತಿರುವ ಚಿತ್ರ ‘ಬೆಂಕಿಯ ಬಲೆ‘. ಈ ಹಿಂದೆ ಅನಂತ್ ನಾಗ್ ಹಾಗೂ ಲಕ್ಷ್ಮೀ ಅವರು ನಟಿಸಿದ್ದ ‘ಬೆಂಕಿಯ ಬಲೆ‘ ಚಿತ್ರ ಜನಮನಸೂರೆಗೊಂಡಿದ್ದು, ಈಗ ಅದೇ ಶೀರ್ಷಿಕೆಯಿಟ್ಟುಕೊಂಡು ಮೈಸೂರಿನ ಶಿವಾಜಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.  ‘ಬೆಂಕಿಯ ಬಲೆ‘ ಚಿತ್ರಕ್ಕೆ ಪ್ರೀತಿಯ ಕೊಲೆ ಎಂಬ ಅಡಿಬರಹವಿದೆ.

ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಆಗಸ್ಟ್ ೪ರ ಶನಿವಾರ ಬೆ.೧೦.೩೦ಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಚಿತ್ರದ ಆಡಿಯೋ ಹಾಗೂ ವಿಡಿಯೋ ಬಿಡುಗಡೆ ಸಮಾರಂಭ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀಚಿನ್ನೇಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜೇಂದ್ರಸಿಂಗ್ ಬಾಬು, ಲೂಸ್‌ಮಾದ ಯೋಗಿ, ಪ್ರಥಮ್ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಶಿವಾಜಿ ಪಿಕ್ಚರ್ಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮಂಡ್ಯ ಟು ಸಿಂಗಾಪುರ ಹಾಗೂ ಕ್ರೈಂ ಚಿತ್ರಗಳ ಅನಾವರಣವಿದ್ದು, ನೂತನ ಪ್ರತಿಭೆಗಳಿಗೆ ಅವಕಾಶ ನೀಡಲು ಶಿವಾಜಿ ಅವರು ನಿರ್ಧರಿಸಿದ್ದಾರೆ.    

ಶಿವಾಜಿ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿರುವ ಈ ಚಿತ್ರಕ್ಕೆ ಮನುರಾವ್, ಅತಿಶಯ್ ಜೈನ್, ಮಂಜುಕವಿ ಸಂಗೀತ ನೀಡಿದ್ದಾರೆ. ನರಹಳ್ಳಿ ರಾಮು, ರಾಜ್ ಕಡೂರು ಅವರ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ. ಶಿವಾಜಿ, ಪ್ರೀತಿ ಮಡಿಕೇರಿ, ನಿರಂಜನ್, ಸುಮ ದೇಶಪ್ರೇಮಿ, ಪವಿತ್ರ ಸಲ್ಮಾನ್, ಲೋಕೇಶ್ ರಾವ್ ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed