ಶಿವಾನಿ ಆರ್ಟ್ಸ್ ಮತ್ತು ಪಿ ಎಸ್ ಮೂವಿ ಮೇಕರ್ಸ್ ಅಡಿಯಲ್ಲಿ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ವೇಮುಗಂಟಿ (ನಂದಿ ಪ್ರಶಸ್ತಿ ವಿಜೇತ) ಚಿತ್ರ ‘ಇಬ್ಬರು ಬಿ ಟೆಕ್ ಸ್ಟೂಡೆಂಟ್ಸ್ ಜರ್ನಿ’ ನಾಳೆಯಿಂದ ಬಿಡುಗಡೆ ಆಗುತ್ತಿದೆ.
ಗೌತಮ್ ರಾಜ್ ಮತ್ತು ಕಿರಣ್ ಚಿಟ್ಟಾಣಿ ಹೊಸದಾಗಿ ಈ ಚಿತ್ರದಿಂದ ಪರಿಚಯ ಆಗುತ್ತಿದ್ದಾರೆ. ಗೌತಮ್ ರಾಜ್ ತೆಲುಗು ಸಿನಿಮಾಗಳ ಹಾಸ್ಯ ನಟ ಕೃಷ್ಣ ಅವರ ಪುತ್ರ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಇಬ್ಬರ ಕಾಲೇಜ್ ಜೀವನ, ಪ್ರೇಮ, ವಿವಾಹ, ವಿರಹ... ಹೀಗೆ ಸಾಗುತ್ತದೆ ಚಿತ್ರಕಥೆ.
ಡೈಲಾಗ್ ಕಿಂಗ್ ಸಾಯಿಕುಮಾರ್ ವೈಧ್ಯನ ಪಾತ್ರದಲ್ಲಿ, ವಿಜಯ್ ಚೆಂಡೂರ್, ರವಿ ಕಿರಣ್, ಬುಲ್ಲೆಟ್ ಪ್ರಕಾಶ್, ವೀಣ ಸುಂದರ್ ಪೋಷಕ ಪಾತ್ರಗಳಲ್ಲಿ ಇದ್ದಾರೆ.
ಫಳನಿ ರಾಜ್ ಶಬ್ದಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಮನೋಹರ್ ಛಾಯಾಗ್ರಹಣ, ಯಲೇಂದ್ರ ಮಹಾವೀರ ಸಂಗೀತ, ಚಿಕ್ಕಬಳ್ಳಾಪುರ ಶ್ರೀನಿವಾಸ್ ಸನ ನಿರ್ಮಾಣ ಈ ಚಿತ್ರಕ್ಕೆ ಒದಗಿಸಿದ್ದಾರೆ.