ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಾಯಕ ನಟರುಗಳೊಂದಿಗೆ ಕೆಲಸ ಮಾಡಿ ದಾಖಲೆ ಹೊಂದಿರುವ ಎಸ್. ನಾರಾಯಣ್ ಅವರು ಈಗ ತಮ್ಮ ಸಂಸ್ಥೆಯಾದ ಚೆಲುವಾಂಬಿಕಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಿಸಿ ನಿರ್ದೇಶಿಸುತ್ತಿರುವ ಹೊಸ ಚಿತ್ರಕ್ಕೆ ಕಿಚ್ಚ ಸುದೀಪ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಎಸ್. ನಾರಾಯಣ್ ಮತ್ತು ಸುದೀಪ್ ಜೋಡಿಯ ಚಿತ್ರವೆಂದರೆ ಬಹಳ ನಿರೀಕ್ಷೆ ಮೂಡಲಿದೆ. ವಿಭಿನ್ನ ರೀತಿಯ ನೈಜ ಸನ್ನಿವೇಶಗಳೊಂದಿಗೆ ಕಥೆಗೆ ತುಂಬಾ ಪ್ರಾಮುಖ್ಯತೆ ನೀಡಿದ್ದು, ಹಾಸ್ಯಕ್ಕೆ ಹೆಚ್ಚು ಒತ್ತುನೀಡಲಾಗಿದೆ ಎಂದು ಎಸ್. ನಾರಾಯಣ್ ತಿಳಿಸಿದರು.
ಈ ಚಿತ್ರದಲ್ಲಿ ಬಹುತಾರಾಗಣವಿದ್ದು ಬಹು ಶ್ರೀಮಂತಿಕೆಯಿಂದ ಚಿತ್ರಹೊರಬರಲಿದೆ. ಈ ಚಿತ್ರದ ಮತ್ತೊಂದು ಸನ್ನಿವೇಶವೆಂದರೆ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯು ನಡೆಯುತ್ತಿದ್ದು, ಎಸ್. ನಾರಾಯಣ್ ಅವರು ಕನ್ನಡತಿಯೊಬ್ಬಳನ್ನು ಪರಿಚಯಿಸಲು ನಿರ್ಧರಿಸಿದ್ದಾರೆ. ಎಸ್. ನಾರಾಯಣ್ ಎಂದಾಕ್ಷಣ ಹಾಡುಗಳ ಸೊಗಸು ಕಾಣುತ್ತದೆ. ಹಾಗೆ ಸುದೀಪ್ ಚಿತ್ರಗಳಲ್ಲಿಕೂಡ ಹಾಡುಗಳಿಗೆ ಸ್ಥಾನ ಹೆಚ್ಚಿರುತ್ತದೆ. ಈ ಜೋಡಿಯ ಹೊಸ ಚಿತ್ರವು ಏಪ್ರಿಲ್ ತಿಂಗಳಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಕನ್ನಡದ ಹುಡುಗಿಯರಿಗೆ ನಾಯಕಿಯಾಗಿ ಅಭಿನಯಿಸಲು ಅವಕಾಶ ಕಲ್ಪಿಸಿದ್ದು, ಇಷ್ಟವುಳ್ಳವರು ಇತ್ತೀಚಿನ ಮೂರು ಭಾವ ಚಿತ್ರಗಳನ್ನು ಚೆಲುವಾಂಬಿಕ ಪಿಕ್ಚರ್ಸ್ ನಂ. ೧೭, ೧ನೇ ಮುಖ್ಯರಸ್ತೆ, ೧ನೇ ಕ್ರಾಸ್, ಶನಿಮಹಾತ್ಮ ದೇವಥಾನ ಸಮೀಪ, ಲಕ್ಷ್ಮೀನಗರ, ಬಸವೇಶ್ವರನಗರ, ಬೆಂಗಳೂರು-೫೬೦ ೦೭೯, ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಎಸ್. ನಾರಾಯಣ್ ತಿಳಿಸಿದ್ದಾರೆ.