ಒಂದು ಮರ್ಡರ್ ಮಿಸ್ಟರಿಯ ಸುತ್ತಮುತ್ತ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ಹೇಳಲು ಪ್ರಯತ್ನಿಸುತ್ತಿರುವ ಚಿತ್ರ ಒಂಭತ್ತನೇ ಅದ್ಭುತ. ಓಂ ಪ್ರಕಾಶ್ ರಾವ್, ಸಂಜಯ್ ಕುಲಕರ್ಣಿ, ಲಕ್ಕಿ ಶಂಕರ್ ಅವರ ಬಳಿ ಕೆಲಸ ಮಾಡಿದ ಸಂತೋಷ್ ಕುಮಾರ್ ಬೆಟಗೇರಿ ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ನಿರ್ಮಾಪಕರೂ ಆಗಿರುವ ಸಂತೋಷ್ ಕುಮಾರ್ ಚಿತ್ರದ ನಾಯಕನಾಗಿಯೂ ಕೂಡಾ ಅಭಿನಯಿಸಿದ್ದಾರೆ. ಒಂದು ಡೆಡ್ ಬಾಡಿ ಸುತ್ತ ಮುತ್ತ ಕಾಮಿಡಿಯ ಸನ್ನಿವೇಶಗಳನ್ನು ಈ ಚಿತ್ರದ ಮೂಲಕ ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಬೆಂಗಳೂರು, ಮಂಡ್ಯ ಹಾಗೂ ಊಟಿಯ ಸುತ್ತಮ ಉತ್ತ ಚಿತ್ರೀಕರಣ ನಡೆಸಲಾಗಿದ್ದು, ಇದೀಗ ಸೆನ್ಸಾರ್ ಕೂಡಾ ಮುಗಿದಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಕೆ.ಕೆ. ಬ್ರದರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ಬಿ. ಕೋಲಾರ ಛಾಯಾಗ್ರಹಣ, ಸುನಿಲ್ ಕೋಷಿ ಸಂಗೀತ, ವೆಂಕಿ ಯು.ಡಿ.ವಿ. ಸಂಕಲನ, ವೇಣುಕೃಷ್ಣ ಸಾಹಿತ್ಯ, ಸುಜಿತ್ ನೃತ್ಯ ನಿರ್ದೇಶನ, ಆರ್. ನಾಗರಾಜ್ ಪುತ್ತೂರು, ಗೋಪಾಲಕೃಷ್ಣೇಗೌಡ ಹಾಗೂ ಮಂಜಣ್ಣ ಬೆಟ್ಟಹಳ್ಳಿ ಸಹ ನಿರ್ಮಾಪಕರಾಗಿದ್ದು ಸಂತೋಷ್, ನಯನಾ ಸಾಹಿ, ಸೆಂಚುರಿ ಗೌಡ, ರಘು ಪಾಂಡೇಶ್ವರ, ಮೈಕಲ್ ಮಧು, ನರಸಿಂಹ ಜೋಷಿ, ಸಂತೋಷ್ ೩೭, ಮೌನೇಶ್, ಶೇಖರ್, ಅರವಿಂದ್ ಗೌಡ, ರಾಜೇಶ್ವರಿ ಪಾಂಡೆ, ದೀಪಶ್ರೀ, ಗೋವಿಂದು, ಋಥ್ವಿ ಇನ್ನು ಮುಂತಾದವರ ತಾರಾಬಳಗವಿದೆ.