ಕೊರೋನ ಕಾಲದಲ್ಲೊಂದು ಅಂತರ್ಜಾತಿ ಮತ್ತು ಮಾದರಿ ವಿವಾಹ..
Posted date: 18 Mon, May 2020 – 09:30:38 AM

ಅರ್ಜುನ್ ಮತ್ತು ನಂದಿನಿ ಅವರದು 10 ವರ್ಷಗಳ ಪ್ರೀತಿ. ಆದ್ರೆ ಬೇರೆ ಜಾತಿ ಎಂಬ ಕಾರಣಕ್ಕೆ ಎರಡೂ ಮನೆಯವರಿಂದ ದೊಡ್ಡಮಟ್ಟದ ವಿರೋಧ. ಮನೆಯವರಿಲ್ಲದೆ ಮದುವೆಯಾಗುವುದು ಬೇಡ ಅಂತ ಕಾದ ಆ ಜೋಡಿ, ನಿರಂತರ 10 ವರ್ಷಗಳ ಪ್ರಯತ್ನದ ನಂತರ ಈಗ ಮನೆಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದ್ರೆ ಈ ಸಂಭ್ರಮವನ್ನು ನೂರಾರು ಜನರ ಜೊತೆ ಸೇರಿ ಆಚರಿಸಲು ಕೊರೋನ ಬಿಡಲಿಲ್ಲವೆಂಬ ಕಾರಣಕ್ಕೆ ಇಂದು ಸರಳವಾಗಿ ಮದುವೆಯಾದರು.  ಅದ್ದೂರಿಯಾಗಿ ಮದ್ವೆಯಾಗಿದಿದ್ದರೆ ಲಕ್ಷಗಳ  ಲೆಕ್ಕದಲ್ಲಿ ಖರ್ಚಾಗುತಿತ್ತು. ಈಗ ಈ ಸರಳ ಮದುವೆ ಕಾರಣ ಆ ಹಣ ಉಳಿದಿದೆ. ಆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಖ್ಯಾತ ನಟರಾದ ನವೀನ್ ಕೃಷ್ಣ ಅವರು ಈ ಮದುವೆಗೆ ಆಗಮಿಸಿ ಆಶೀರ್ವದಿಸಿದರಲ್ಲದೆ ಆ ₹50000 ಗಳ ಪರಿಹಾರದ ಚೆಕ್ ಅನ್ನು ದಂಪತಿಗಳಿಂದ ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸಿದರು. ಹಾಗೆ ನೂರು ಬಡ ಜನರಿಗೆ ಆಹಾರದ ಕಿಟ್ ಗಳನ್ನು ಸಹ ವಿತರಿಸಿದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed