ಕ್ಷತ್ರಿಯ ಸಿನಿಮಾದಲ್ಲಿ ಅಬ್ರಾರ್ ಜಾಹೂರ್ ವಿಲನ್!
Posted date: 01 Thu, Aug 2019 – 02:09:33 PM

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ನಾಯಕನಟನಾಗಿ ನಟಿಸುತ್ತಿರುವ ಸಿನಿಮಾ ಕ್ಷತ್ರಿಯ.  ನೀರ್ಜಾ, ಉರಿ, ಕಮ್ಯಾಂಡೋ ೩, ಮಿಷನ್ ಮಂಗಲ್ ರಂತಹ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸಿರುವ ಅಬ್ರಾರ್ ಜಾಹೂರ್ ಧಾರ್ ಕ್ಷತ್ರಿಯ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ.

ಅಕ್ಕ ತಮ್ಮನ ನಡುವಿನ ಬಾಂದವ್ಯದ ಮೇಲೆ ಕ್ಷತ್ರಿಕ ಕಥೆ ಸಾಗಲಿದ್ದು, ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕಥಾವಸ್ತು ಚಿತ್ರಕ್ಕೆ ಹೈಲೈಟು. ತೀರಾ ಜವಾಬ್ದಾರಿಯುತ ಅಕ್ಕನಿಗೆ ಒಬ್ಬ ತರ್ಲೆ ತಮ್ಮ ಇದ್ದರೆ ಹೇಗಿರುತ್ತದೆ, ನಂತರ ಆತ ಸಮಾಜದ ಒಳಿತಿಗಾಗಿ ಶ್ರಮಿಸುವಂತವನಾದರೆ ಹೇಗಿರುತ್ತದೆ ಅನ್ನೋದೆ ಚಿತ್ರದ ಎಳೆಯಾಗಿಟ್ಟುಕೊಂಡು ಅನಿಲ್ ಮಂಡ್ಯ ಕ್ಷತ್ರಿಯ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು  ವೈಷ್ಣವಿ ಮನು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಎ.ವೆಂಕಟೇಶ್, ಕಿಶೋರ್ ಮಂಗಳವಾರಪೇಟೆ, ಎಂ.ವಿ.ಮನೀಶ್ ಮತ್ತು ಎಂ.ಜೆ. ವಿಷ್ಣುವರ್ಧನ್ ಸೇರಿ ನಿರ್ಮಿಸುತ್ತಿದ್ದಾರೆ. ಧರ್ಮವಿಶ್ ಸಂಗೀತ, ಡಾ. ಕೆ.

ರವಿವರ್ಮ ಸಾಹಸವಿರುವ ಈ ಚಿತ್ರಕ್ಕೆ ಬಹದ್ದೂರ್ ಚೇತನ್ ಕುಮಾರ್ ಭರ್ಜರಿಯಾದ ಸಂಭಾಷಣೆ ರಚಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed