ಹೆಸರಾಂತ ನಿರ್ದೇಶಕ ಸಾಯಿಪ್ರಕಾಶ್ ಸಂಸಾರದಲ್ಲಿ ಗೋಲ್ ಮಾಲ್ ಎಬ್ಬಿಸುತ್ತಿದ್ದಾರೆ. ೫ ಸತಿಪತಿಯರ ನಡುವಿನ ಕಿತಾಪತಿ ಈ ಚಿತ್ರದಲ್ಲಿ ಮುಖ್ಯವಾಗಿದ್ದು ಇದು ದಾಸರಿ ನಾರಾಯಣ್ ರಾವ್ ಅವರ ’ಆದಿ ವಾರಂ ಅಡವಾಡಿಕೆ ಸೆಲ್ವಂ ಕಾವಾಲಿ’ ಚಿತ್ರದ ಸ್ಫೂರ್ತಿಯಿಂದ ತಯಾರಾಗುತ್ತಿರುವ ಚಿತ್ರ ಸದ್ಯಕ್ಕೆ ಗ್ಲೋಬಲ್ ಅಪಾರ್ಟ್ಮೆಂಟ್ ಹಾಗೂ ಕಂಟ್ರಿ ಕ್ಲಬ್ಬಿನ ಕಾಟೇಜಿನಲ್ಲಿ ಚಿತ್ರೀಕರಣ ನಡೆಸಿದೆ.
೫ ಸತಿಪತಿಗಳಾಗಿ ಊಮಾಶ್ರೀ ಹಾಗೂ ರಾಜು ತಾಳೀಕೋಟೆ, ಮೋಹನ್ ಮತ್ತು ಅನು ಪ್ರಭಾಕರ್, ಸಿಹಿಕಹಿ ಚಂದ್ರು ಹಾಗೂ ತಾರಾ, ತಬಲಾ ನಾಣಿ ಮತ್ತು ಲಕ್ಷ್ಮಿ ಭಾಗವತರ್, ಸಾಧು ಕೋಕಿಲ ಹಾಗೂ ನಯನಾ ಕೃಷ್ಣ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳು ಹಾಸ್ಯಮಯವಾಗಿದ್ದು ಎಲ್ಲಾ ಕಲಾವಿದರುಗಳಿಗೂ ಸಮಾನವಾದ ಅವಕಾಶವು ಇದೆ. ಈ ಚಿತ್ರದ ಹಾಡೊಂದರಲ್ಲಿ ಮಲೆಯಾಳಂ ಚಿತ್ರದ ಶಕೀಲಾ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ೨೦ ಜನಪ್ರಿಯ ಗೀತೆಗಳನ್ನು ಆಯ್ದು ಅದರ ತುಣುಕುಗಳನ್ನು ಈ ಚಿತ್ರದಲ್ಲಿ ಬಳಸಲಾಗುತ್ತಿದೆ. ಸಾಧು ಕೋಕಿಲ ಈ ಚಿತ್ರದ ಸಂಗೀತ ನಿರ್ದೇಶಕರು.
ಈ ಹಿಂದೆ ೩ನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯ ಚಿತ್ರ ನಿರ್ಮಿಸಿದ ಪ್ರಭಾಕರ್ ರೆಡ್ಡಿ ಈ ಚಿತ್ರದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವರು.