ಜನವರಿಯಲ್ಲಿ ಕಡಲಮುತ್ತು ಚಿತ್ರಕ್ಕೆ ಚಾಲನೆ
Posted date: 17 Tue, Nov 2020 – 05:43:59 PM

ಮಕರಜ್ಯೋತಿ ಫಿಲಂಸ್ ಲಾಂಛನದಲ್ಲಿ ಕಡಲಮುತ್ತು ಎಂಬ ಚಿತ್ರ ಜನವರಿ 15ರ ಸಂಕ್ರಾಂತಿಯ ನಂತರ ಆರಂಭವಾಗಲಿದೆ.
ಈ ಸಂಸ್ಥೆಯಿಂದ  ನಿರ್ಮಾಣವಾಗುತ್ತಿರುವ ನೂತನ  ಚಿತ್ರವನ್ನು  ತಾರನಾಥ ಶೆಟ್ಟಿ ಬೋಳಾರ್ ನಿರ್ಮಾಣ ಮಾಡುತ್ತಿದ್ದಾರೆ.
ಈ ಹಿಂದೆ ಅವರು ನಿಶಬ್ದ ೨ ಚಿತ್ರವನ್ನು ನಿರ್ಮಾಣ ಮಾಡಿದ್ದರು ಅದರ ಯಶಸ್ವಿ ಹಿಂದೆ ಮೂರು ವರ್ಷಗಳ ನಂತರ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಈ ಚಿತ್ರದ ನಿರ್ದೇಶನ ಹಾಗೂ ನಾಯಕನ ಜವಾಬ್ದಾರಿಯನ್ನು  ದೇವರಾಜ್ ಕುಮಾರ್ ಮಾಡಲಿದ್ದಾರೆ ಈ ಹಿಂದೆ ದೇವರಾಜ ಕುಮಾರ್ ಅವರು ಡೇಂಜರ್ ಜೋನ್ ಮತ್ತು ನಿಶಬ್ದ ೨ ಹಾಗೂ ಅನುಷ್ಕಾ ನಿರ್ದೇಶನ ಮಾಡಿದ್ದು ಹಾಗೂ ಇತ್ತೀಚೆಗೆ ತಾಜ್ ಮಹಲ್ -2 ನಿರ್ದೇಶನದೊಂದಿಗೆ, ನಾಯಕನಟನಾಗೂ ಅಭಿನಯಿಸಿದ್ದಾರೆ. ಕಡಲಮುತ್ತು ಚಿತ್ರದಲ್ಲೂ ನಾಯಕನಾಗಿ ಅಭಿನಯಿಸುತ್ತಿರುವ ದೇವರಾಜ್ ಕುಮಾರ್ ಅವರು‌ ನಿರ್ದೇಶನವನ್ನು ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ ಸಹ ದೇವರಾಜ್ ಕುಮಾರ್ ಅವರದೆ.
 
ದೇವರಾಜ್ ಕುಮಾರ್ ಅವರಿಗೆ  ಹೊಸ ನಾಯಕಿಯಾಗಿ ನಟಿಸಲು‌ ನೂತನ ಪ್ರತಿಭೆ ಅನ್ವೇಷಣೆ ನಡೆಸಲಾಗುತ್ತಿದೆ.
ಈ ಚಿತ್ರದ ಕಥಾವಸ್ತು ವಿಶೇಷವಾಗಿದ್ದು ಸಂಪೂರ್ಣ ಚಿತ್ರೀಕರಣ ಸಮುದ್ರ ದಂಡೆಯಲ್ಲಿ ನಡೆಯಲಿದೆ.

ವೀನಸ್ ಮೂರ್ತಿ ಛಾಯಾಗ್ರಹಣ,
ವಿಕ್ರಂ ಸೆಲ್ವ ಸಂಗೀತ ನಿರ್ದೇಶನ,
ರವೀಂದ್ರ ಮುದ್ದಿ ಸಾಹಿತ್ಯ,
ಚಂದ್ರು ಬಂಡೆ ಸಾಹಸ ನಿರ್ದೇಶನ, ವಿಜಯ್ ಸಂಕಲನ ಹಾಗೂ ಬಿ.ಧನಂಜಯ್ ಅವರ ನೃತ್ಯ ನಿರ್ದೇಶನ  ಈ ಚಿತ್ರಕ್ಕಿದೆ.
45 ದಿನಗಳ ಕಾಲ  ಮಂಗಳೂರು ಕುಂದಾಪುರ, ಉಡುಪಿ, ಕಾರವಾರ ಮುಂತಾದ ಕಡೆ  ಚಿತ್ರೀಕರಣ ನಡೆಯಲಿದೆ.


 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed