ಫ಼ೆಬ್ರವರಿಯಲ್ಲಿ ?ಚಿಂಗಾರಿ
Posted date: 23 Mon, Jan 2012 ? 08:52:18 AM

ಮಹಾಶೈಲ ಸಿನಿ ಸಂಕುಲ ಲಾಂಛನದಲ್ಲಿ ಬಿ.ಮಹದೇವು ಮತ್ತು ಮನುಗೌಡ ಅವರು ನಿರ್ಮಿಸಿರುವ ‘ಚಿಂಗಾರಿ ಚಿತ್ರ ಫ಼ೆಬ್ರವರಿ ಮೊದಲವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
      ದರ್ಶನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ದೀಪಿಕಾ ಕಾಮಯ್ಯ, ಭಾವನಾ, ಸೃಜನ್ ಲೋಕೇಶ್, ಯಶಸ್‌ಸೂರ್ಯ, ಪ್ರದೀಪ್, ರಮೇಶ್‌ಭಟ್, ಸುಮಿತ್ರ, ಮಧು, ತೇಜು, ವಿಶ್ವ ಮುಂತಾದವರಿದ್ದಾರೆ.
      ಚಿತ್ರಕ್ಕೆ ಕಥೆ ಬರೆದಿರುವ ಹರ್ಷ ನೃತ್ಯ ನಿರ್ದೇಶನದೊಂದಿಗೆ ನಿರ್ದೇಶನವನ್ನೂ ಮಾಡಿದ್ದಾರೆ. ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಜೊತೆಗೂಡಿ ಚಿತ್ರಕಥೆ ಸಹ ಬರೆದಿದ್ದಾರೆ.
     ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ‘ಚಿಂಗಾರಿಗೆ ಯೋಗಾನಂದ್ ಮುದ್ದಾನ್ ಹಾಗೂ ಸಂತೋಷ್ ಸಂಭಾಷಣೆ ಬರೆದಿದ್ದಾರೆ. ಬೆಂಗಳೂರು, ಸ್ವಿಜರ್‌ಲ್ಯಾಂಡ್, ಮೈಸೂರಿನಲ್ಲಿ ಚಿತ್ರೀಕರಣ ನಡೆದಿ
ದೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed