ಬ್ಯಾಡ್ ಮ್ಯಾನರ್ಸ್ ತಂಡ ಕೂಡಿಕೊಂಡ ತಾರಾಅನುರಾಧ
Posted date: 16 Tue, Feb 2021 07:42:40 PM

ಬ್ಯಾಡ್ ಮ್ಯಾನರ್ಸ್ ತಂಡ ಕೂಡಿಕೊಂಡ, ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ, ಶ್ರೀಮತಿ ತಾರಾಅನುರಾಧ. ನೆಚ್ಚಿನ ನಾಯಕ ಅಂಬರೀಷ್ ಅವರೊಟ್ಟಿಗೆ ಅಭಿನಯಿಸಿದ ಕಲಾವಿದೆ ತಾರಮ್ಮ, ಈಗ ಅಂಬಿ ಪುತ್ರನೊಂದಿಗೆ ತೆರೆಯನ್ನ ಹಂಚಿಕೊಳ್ತಿದ್ದಾರೆ. ಈ ಮೂಲಕ ರೆಬೆಲ್ ಸ್ಟಾರ್ ಎರಡನೇ ತಲೆಮಾರಿನ ಜೊತೆಗೆ ನಟಿಸ್ತಿದ್ದಾರೆ. ಜೊತೆಗೆ ಚೊಚ್ಚಲ ಬಾರಿಗೆ ನಿರ್ದೇಶಕ ದುನಿಯಾ ಸೂರಿಯವರ ಚಿತ್ರದಲ್ಲಿ ತಾರಾ ನಟಿಸುತ್ತಿದ್ದಾರೆ.ಈ ವಿಚಾರವಾಗಿ ತುಂಬಾ ಎಕ್ಸೈಟ್ ಆಗಿರೋ ತಾರಮ್ಮ ಇವತ್ತಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed