ಕಳೆದ ವರ್ಷ ಪ್ರಿಯಾಂಕಉಪೇಂದ್ರ ಅಭಿನಯಿಸಿದ 2ನೇ ಹಾಫ್ಚಿತ್ರ ನಿರ್ಮಿಸಿದ ನಿರ್ಮಾಪಕ ನಾಗೇಶ್ಕುಮಾರ್ಯಾವುದೇ ಸದ್ದುಗದ್ದಲವಿಲ್ಲದೆ ಮತ್ತೊಂದುಚಿತ್ರ ಮುಗಿಸಿದ್ದಾರೆ.
ಬೃಂದಾವನ್ಎಂಟರ್ಪ್ರೈಸಸ್ ಲಾಂಛನದಡಿಯಲ್ಲಿ ನಾಗೇಶ್ ನಿರ್ಮಿಸುತ್ತಿರುವ ಮತ್ತೊಂದುಚಿತ್ರ ನಮ್ಮಗಣಿ ಬಿ.ಕಾಂ ಪಾಸ್ಚಿತ್ರದ ಮಾತಿನ ಮರುಲೇಪನಕಾರ್ಯವುಇತ್ತೀಚೆಗೆ ನಗರದ ವಿಜಯ ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು.
ಚಿತ್ರವುಆಗಸ್ಟ್ನಲ್ಲಿರಾಜ್ಯಾದ್ಯಂತತೆರೆಕಾಣಲಿದೆಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ನಾಗರಾಜ್ (ಸಾಮ್ರಾಟ್) ಛಾಯಾಗ್ರಹಣ, ವಿಕಾಸ್ವಸಿಷ್ಠ ಸಾಹಿತ್ಯ ಸಂಗೀತ, ಜೀವನ್ ವಾಸುದೇವನ್ ನೃತ್ಯ, ವಿಜೇತ್ಚಂದು ಸಂಕಲನವಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನದ ಹೊಣೆ ಹೊತ್ತಿರುವಅಭಿಷೇಕ್ ಶೆಟ್ಟಿ ನಾಯಕನಾಗಿಯೂಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದತಾರಾಗಣದಲ್ಲಿಅಭಿಷೇಕ್ಶೆಟ್ಟಿ, ಐಶಾನಿಶೆಟ್ಟಿ, ಪಲ್ಲವಿಗೌಡ, ಸುಚೇಂದ್ರ ಪ್ರಸಾದ್, ಜಹಂಗೀರ್, ಸುಧಾ ಬೆಳವಾಡಿ, ಮಂಜುನಾಥ ಹೆಗ್ಡೆ, ಶಂಕರ್ಅಶ್ವತ್ಥ್, ದಿನೇಶ್ ಮಂಗಳೂರು, ಆಶಾರಾಣಿ, ರಘುಪಣೀಶ್ವರ್ ಮುಂತಾದವರಿದ್ದಾರೆ.