ವೇಗದೂತ ಚಿತ್ರಕ್ಕೆ ಲೂಸ್ ಮಾದ ಯೋಗಿ ಕ್ಲಾಪ್
Posted date: 10 Mon, Sep 2018 – 10:20:00 AM

ಇತ್ತೀಚೆಗೆ ಹೊಸಬರ ಥ್ರಿಲ್ಲರ್ ಚಿತ್ರಗಳೇ ಹೆಚ್ಚಾಗಿ ಸದ್ದುಮಾಡುತ್ತಿವೆ. ಅಂಥಾ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರ ವೇಗದೂತ ಕಳೆದ ಶುಕ್ರವಾರ ಕತ್ರಿಗುಪ್ಪೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾಂರಭ ನಡೆಯಿತು. ಚಿತ್ರದ ಮುಹೂರ್ತದ ಮೊದಲ ದೃಶ್ಯಕ್ಕೆ ಲೂಸ್ ಮಾದ ಯೋಗಿ ಕ್ಲಾಪ್ ಮಾಡಿದರೆ ಆರ್ಮಿ ಅಧಿಕಾರಿ ತಾರೇಶ್ ಕ್ಯಾಮರಾ ಚಾಲನೆ ಮಾಡಿದರು. ವೇಗದೂತ ಒಂದು ಥ್ರಿಲ್ಲರ್ ಕಥೆಯಾಗಿದೆ ಈ ಹಿಂದೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಪ್ರದೀಪ್ ಚಂದ್ರ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಅರ್ಧಭಾಗ ಹಳ್ಳಿಯಲ್ಲಿ ಹಾಗೂ ಇನ್ನರ್ಧಭಾಗ ಸಿಟಿಯಲ್ಲಿ ರಾತ್ರಿವೇಳೆಯಲ್ಲಿ  ನಡೆಯುವ  ಕಥೆ ಈ ಚಿತ್ರದಲ್ಲಿದೆ. ಸ್ಮಗ್ಲಿಂಗ್, ಸೆಂಟಿಮೆಂಟ್, ಪೋಲಿಸ್ ಫ್ಯಾಮಿಲಿ, ಲವ್ ಕಥಾಹಂದರ ಹೋಂದಿರುವ ಈ ಚಿತ್ರಕ್ಕೆ ಬೆಂಗಳೂರು ಹಾಗೂ ಹಾಸನ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ.

ಚಂದ್ರ್ರಾಸ್ ಪ್ರೊಡಕ್ಷನ್ ಲಾಂಛನದಲ್ಲಿ ಶ್ರೀನಿವಾಸ್ ಗೌಡ  ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಯಿ ಕಿರಣ್ ಸಂಗೀತ, ಉಮೇಶ್ ಛಾಯಾಗ್ರಹಣ, ಕಿಟ್ಟಪ್ಪ ಸಂಕಲನ, ಪ್ರದೀಪ್‌ಚಂದ್ರ ಟೀಂ ಕಥೆ, ಚಿತ್ರಕಥೆ, ಸಂಭಾಷಣೆ, ಅಪ್ಪು ವೆಂಕಟೇಶ್ ಸಾಹಸವಿದೆ. ಸಂದೀಪ್, ಪ್ರದೀಪ್, ಅಂಜನ್, ಪೂಜಾರಿ, ಪ್ರಮೋದ್‌ಶೆಟ್ಟಿ, ಚೈತ್ರ, ರಾಜೇಶ್ವರಿ, ರೇಣು, ಗೌರವ್, ಲಿರಿನ್ ಕಾವೇರಪ್ಪ, ಮಂಜು ಇನ್ನೂ ಮುಂತಾದವರ ತಾರಾಬಳಗವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed