ಸಿಂಗಾಪುರದಲ್ಲಿ ?ಅದ್ದೂರಿ ಹಾಡುಗಳು
Posted date: 09 Mon, Jan 2012 ? 09:06:46 AM

ಸಿ.ಎಂ.ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಿ.ಎಂ.ಆರ್.ಶಂಕರರೆಡ್ಡಿ ನಿರ್ಮಿಸುತ್ತಿರುವ ‘ಅದ್ದೂರಿ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಸಿಂಗಾಪುರ ಹಾಗೂ ಮಲೇಶಿಯಾದಲ್ಲಿ ನಡೆದಿದೆ. ಧೃವಸರ್ಜಾ ಹಾಗೂ ರಾಧಿಕಾಪಂಡಿತ್ ಅಭಿನಯಿಸಿದ ಈ ಹಾಡುಗಳಿಗೆ ಇಮ್ರಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ.
    ಚಿತ್ರೀಕರಣ ಮುಕ್ತಾಯ ಹಂತ ತಲುಪಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ನಿರ್ದೇಶಕ ಎ.ಪಿ.ಅರ್ಜುನ್ ತಿಳಿಸಿದ್ದಾರೆ. ಕರುನಾಡ ಸುಂದರ ತಾಣಗಳು ಹಾಗೂ ವಿದೇಶದಲ್ಲಿ ‘ಅದ್ದೂರಿ ಚಿತ್ರೀಕರಣ ನಡೆದಿದೆ. ಧೃವಸರ್ಜಾ, ರಾಧಿಕಾ ಪಂಡಿತ್. ತಬಲನಾಣಿ, ರಾಕು ತಾಳಿಕೋಟೆ, ಬುಲೆಟ್ ಪ್ರಕಾಶ್, ನೀನಾಸಂ ಸತೀಶ್, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.  ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಸೂರ್ಯ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ಹರ‍್ಷ ನೃತ್ಯ ನಿರ್ದೇಸನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮೋಹನ್.ಬಿ.ಕೆರೆ ಕಲಾ ನಿರ್ದೇಶನ ‘ಅದ್ದೂರಿಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed