ಸುವರ್ಣ ವಾಹಿನಿಯಲ್ಲಿ ಮತ್ತೆ ಗುರುರಾಘವೇಂದ್ರ ವೈಭವ
Posted date: 07 Thu, May 2020 – 12:48:52 PM

ಎಂ.ಎಸ್.ರಾಮಯ್ಯ ಮೀಡಿಯಾ ಎಂಡ್ ಎಂಟರ್ ಟೈನರ್ ಲಾಂಛನದಲ್ಲಿ ಅನಿತಾ ಪಟ್ಟಾಭಿರಾಮ್ ಹಾಗೂ ಡಾ'' ಎಂ.ಆರ್.ಪಟ್ಟಾಭಿರಾಮ್ ಅವರು ನಿರ್ಮಿಸಿದ್ದ ಮಂತ್ರಾಲಯ ಗುರುಗಳ ಕುರಿತಾದ ಗುರು ರಾಘವೇಂದ್ರ ವೈಭವ ಧಾರಾವಾಹಿ ಜೂನ್ ೨೧ ರಿಂದ ಬೆ.೭ ರಿಂದ ೮ ರವರೆಗೂ ಸುವರ್ಣ ವಾಹಿನಿಯಲ್ಲಿ ಮರುಪ್ರಸಾರವಾಗಲಿದೆ..

ಈ ಪೌರಾಣಿಕ ಧಾರಾವಾಹಿಯ ಮೊದಲ ಪ್ರಸಾರದಲ್ಲಿ ೨೫ ದೇಶಗಳಲ್ಲಿ ವೀಕ್ಷಿಸಿದ್ದರು.. ೫೦೦ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊದಲ ಪೌರಾಣಿಕ ಧಾರವಾಹಿ‌ ಎಂಬ ಹೆಗ್ಗಳಿಕೆ ಇದಕ್ಕಿದೆ... ಸಿನಿಮಾಗಳನ್ನು ಮೀರಿಸುವ
ಅದ್ದೂರಿ ಸೆಟ್ ಗಳಲ್ಲಿ ಈ ಧಾರಾವಾಹಿ ಚಿತ್ರೀಕರಣಗೊಂಡಿದ್ದು ಇದರ ಹೆಮ್ಮೆ...
ಹಿಂದೆ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳ ಪ್ರಸಾರ ಸಮಯದಲ್ಲಿ ಜನ‌ ಟಿವಿಗೆ ಪೂಜೆ‌ ಮಾಡಿ ಹೇಗೆ ನೋಡುತ್ತಿದ್ದರೊ, ಹಾಗೆ ಈ ಧಾರಾವಾಹಿ ಪ್ರಸಾರ ಸಮಯದಲ್ಲೂ ಪೂಜೆ ಮಾಡಿ ನೋಡುತ್ತಿದ್ದರು..
ನೂರೈವತ್ತಕ್ಕೂ ಅಧಿಕ  ದೇವರನಾಮಗಳನ್ನು ಬಳಸಿಕೊಂಡಿರುವುದು ಧಾರಾವಾಹಿ ವಿಶೇಷ..
ರಾಯರ ಭಕ್ತರ ಹಾಗೂ ವೀಕ್ಷಕರ ಬಹುದಿನದ ಬೇಡಿಕೆಯನ್ನು‌ ಸುವರ್ಣ ವಾಹನಿ ಪೂರೈಸುತ್ತಿದೆ...

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed