ಎಂ.ಎಸ್.ರಾಮಯ್ಯ ಮೀಡಿಯಾ ಎಂಡ್ ಎಂಟರ್ ಟೈನರ್ ಲಾಂಛನದಲ್ಲಿ ಅನಿತಾ ಪಟ್ಟಾಭಿರಾಮ್ ಹಾಗೂ ಡಾ'' ಎಂ.ಆರ್.ಪಟ್ಟಾಭಿರಾಮ್ ಅವರು ನಿರ್ಮಿಸಿದ್ದ ಮಂತ್ರಾಲಯ ಗುರುಗಳ ಕುರಿತಾದ ಗುರು ರಾಘವೇಂದ್ರ ವೈಭವ ಧಾರಾವಾಹಿ ಜೂನ್ ೨೧ ರಿಂದ ಬೆ.೭ ರಿಂದ ೮ ರವರೆಗೂ ಸುವರ್ಣ ವಾಹಿನಿಯಲ್ಲಿ ಮರುಪ್ರಸಾರವಾಗಲಿದೆ..
ಈ ಪೌರಾಣಿಕ ಧಾರಾವಾಹಿಯ ಮೊದಲ ಪ್ರಸಾರದಲ್ಲಿ ೨೫ ದೇಶಗಳಲ್ಲಿ ವೀಕ್ಷಿಸಿದ್ದರು.. ೫೦೦ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಮೊದಲ ಪೌರಾಣಿಕ ಧಾರವಾಹಿ ಎಂಬ ಹೆಗ್ಗಳಿಕೆ ಇದಕ್ಕಿದೆ... ಸಿನಿಮಾಗಳನ್ನು ಮೀರಿಸುವ
ಅದ್ದೂರಿ ಸೆಟ್ ಗಳಲ್ಲಿ ಈ ಧಾರಾವಾಹಿ ಚಿತ್ರೀಕರಣಗೊಂಡಿದ್ದು ಇದರ ಹೆಮ್ಮೆ...
ಹಿಂದೆ ರಾಮಾಯಣ ಹಾಗೂ ಮಹಾಭಾರತ ಧಾರಾವಾಹಿಗಳ ಪ್ರಸಾರ ಸಮಯದಲ್ಲಿ ಜನ ಟಿವಿಗೆ ಪೂಜೆ ಮಾಡಿ ಹೇಗೆ ನೋಡುತ್ತಿದ್ದರೊ, ಹಾಗೆ ಈ ಧಾರಾವಾಹಿ ಪ್ರಸಾರ ಸಮಯದಲ್ಲೂ ಪೂಜೆ ಮಾಡಿ ನೋಡುತ್ತಿದ್ದರು..
ನೂರೈವತ್ತಕ್ಕೂ ಅಧಿಕ ದೇವರನಾಮಗಳನ್ನು ಬಳಸಿಕೊಂಡಿರುವುದು ಧಾರಾವಾಹಿ ವಿಶೇಷ..
ರಾಯರ ಭಕ್ತರ ಹಾಗೂ ವೀಕ್ಷಕರ ಬಹುದಿನದ ಬೇಡಿಕೆಯನ್ನು ಸುವರ್ಣ ವಾಹನಿ ಪೂರೈಸುತ್ತಿದೆ...