ಆಂಧ್ರ ಪ್ರದೇಶದ ಮುಳ್ಳುಗುರು ಅನಂತ ರಾಮುಡು ವಿಧ್ಯಾ ಸಂಸ್ಥೆ ಹಾಗೂ ವ್ಯವಸಾಯ ವೃತ್ತಿಯವರು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ‘ಸ್ನೇಹವೇ ಪ್ರೀತಿ’ ಚಿತ್ರ ತಯಾರಿಸಿದ್ದಾರೆ.
ಕನ್ನಡ ಭಾಷೆಯ ‘ಸ್ನೇಹವೇ ಪ್ರೀತಿ’ ಜಿ ಎಲ್ ಬಿ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ತಯಾರಾಗಿದ್ದು ನಾಳೆಯಿಂದ ಬಿಡುಗಡೆ ಆಗುತ್ತಿದೆ.
ಶ್ರೀ ಚಂದ್ರು ಅವರ ಗೀತ ಸಾಹಿತ್ಯಕ್ಕೆ ಬೇಲೂರು ಘಟಿಕಾಚಲ ಸಂಗೀತ ನಿರ್ದೇಶನ ಮಾಡಿರುವ ಈ ಚಿತ್ರದ ಕಥಾ ನಾಯಕ ಸೂರಜ್ ಗೌಡ. ಸೋನಿಯ ಹಾಗೂ ಫರ್ಹಾ ಕಥಾ ನಾಯಕಿಯರು, ರವೀಂದ್ರ ತೇಜ, ಓಂ ಸಾಯಿ ಪ್ರಕಾಷ್, ಸಾಧು ಕೋಕಿಲ, ರಮೇಶ್ ಭಟ್, ಚಿತ್ರ ಶೆಣೈ, ಧನರಾಜ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ಇದ್ದಾರೆ.
ಶಶಿಕಿರಣ್ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸ, ಮದನ್ ಹರಿಣಿ ನೃತ್ಯ, ಮಾರ್ತಾಂಡ ಕೆ ವೆಂಕಟೇಶ್ ಸಂಕಲನ ಒದಗಿಸಿದ್ದಾರೆ.