ಚನ್ನಕೆಶವ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಡಿ.ಸಿ.ಮೋಹನ್ ಹಾಗೂ ಪ್ರಕಾಶ್ ತುಪ್ಪದಕೊಳ್ಳ ಅವರು ನಿರ್ಮಿಸುತ್ತಿರುವ ‘ದಾರಿದೀಪ‘ ಮಕ್ಕಳಚಿತ್ರದ ಮುಹೂರ್ತ ಸಮಾರಂಭ ಹೊಳಲ್ಕೆರೆಯ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಪತ್ರಕರ್ತ ಹಾಗೂ ನಟ ಯತಿರಾಜ್ ಆರಂಭ ಫಲಕ ತೋರಿದರು. ಡಿ.ಸಿ.ಮೋಹನ್ ಹಾಗೂ ಪ್ರಕಾಶ್ ತುಪ್ಪದಕೊಳ್ಳ ಕ್ಯಾಮೆರಾ ಚಾಲನೆ ಮಾಡಿದರು. ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಅಡಿಬರಹ ಈ ಚಿತ್ರಕ್ಕಿದೆ.
ಹೇಮಂತ್ ನಾಯ್ಕ ಕೆ(ಹೊಳಲ್ಕೆರೆ) ನಿರ್ದೇಶನದ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಗರಸ್ಯಾ, ಧರ್ಮಪುರ ಚಿತ್ರಗಳನ್ನು ನಿರ್ದೇಶಿಸಿದ್ದ ಅನುಭವ ಇವರಿಗಿದೆ. ಹೊಳಲ್ಕೆರೆ, ಚಿತ್ರದುರ್ಗ, ದಾವಣಗೆರೆ ಮುಂತಾದ ಕಡೆ ೨೫ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ರಾಜ್ ಭಾಸ್ಕರ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಮೇಶ್ ಕೊಯಿರಾ ಅವರ ಛಾಯಾಗ್ರಹಣವಿದೆ. ಜೆ.ಸಿಕೆ. ಹಾಗೂ ರಾಸುತಿ ಗಿರೀಶ್ರಾವ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಇಂಚರ, ತೇಜಸ್ವಿ, ಶಿವು, ಸೃಷ್ಠಿ, ಶ್ರೇಯಸ್, ಚನ್ನಕೇಶವಮೂರ್ತಿ, ಸ್ವಾತಿ ನಾಡಿಗ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.