ನಿರ್ಮಾಪಕ ವಿಜಯ್ ಸದಾನಂದ್ ತಮ್ಮ ಪುತ್ರ ಆಕಾಶ್ ನಾಯಕನಾಗಲು ತಯಾರಿಸಿರುವ ಚಿತ್ರ ‘ಬಿಂದಾಸ್ ಗೂಗ್ಲಿ’ ಈ ಶುಕ್ರವಾರ ನಾಳೆಯಿಂದ ಬಿಡುಗಡೆ ಆಗುತ್ತಿದೆ. ನಿರ್ಮಾಪಕರ ದ್ವಿತೀಯ ಪುತ್ರ ಭೂಷಣ್ ಕಾರ್ಯಕಾರಿ ನಿರ್ಮಾಪಕರು.
ಇದೊಂದು ನೃತ್ಯ ಆಧಾರಿತ ಚಿತ್ರ. ಶೀರ್ಷಿಕೆಗೆ ?ಸ್ಟ್ರಿಕ್ಟ್ ಗುರುಕುಲ? ಅಂತ ಹೇಳಲಾಗಿದೆ. ಧರ್ಮ ಕೀರ್ತಿರಾಜ್ ಈ ಚಿತ್ರದಲ್ಲಿ ತರಬೇತುದಾರ ಪಾತ್ರದಲ್ಲಿ ಇದ್ದಾರೆ. ಇದೆ ಚಿತ್ರದಲ್ಲಿ ಸಂಸದ ಸುರೇಶ್ ಅಂಗಾಡಿ ಹಾಗೂ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸಂತೋಷ್ ಕುಮಾರ್ ಈ ಚಿತ್ರದ ನಿರ್ದೇಶಕರು ಒಂದು ಕೌಟಂಬಿಕ ಚಿತ್ರದ ಬಗ್ಗೆ ಆಸಕ್ತಿ ವಹಿಸಿದ್ದಾರೆ. ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವಿನು ಮನಸ್ಸು ಏಳು ಹಾಡುಗಳಿಗೆ ರಾಗ ಸಂಯೋಜನೆ ಮಾಡಿರುವರು.
ನಿಮಿಕ ರತ್ನಕರ್, ಶಿಲ್ಪಾ ಲದ್ದಿಮತ್, ಮಮತ ರಾವತ್, ರವಿ ಶೇಟ್, ಅಶೋಕ್, ಕಾರ್ತಿಕ್, ಶ್ರುತಿ, ಕೀರ್ತಿ ರಾಜ್, ರಾಮಕೃಷ್ಣ, ವಾಣಿಶ್ರೀ, ಮುತುರಾಜ್, ಜೆನೀಫರ್, ವಿಜಯಕುಮಾರ್ ಅನ್ವೇಕರ್, ರೀಣ ಅರ್ಕಸಲಿ, ಅಭಿಲಾಷ್, ಶಷಾಂಕ್, ರಣವೀರ್, ಭೋಜರಾಜ್ ತಾರಾಗಣದಲ್ಲಿ ಇದ್ದಾರೆ.
ವೆಂಕಟೇಶ್ ಸಂಕಲನ, ಕುಂಗ್ ಫೂ ಚಂದ್ರು ಸಾಹಯ, ಹೈಟ್ ಮಂಜು ನೃತ್ಯ ಈ ?ಬಿಂದಾಸ್ ಗೂಗ್ಲಿ? ಚಿತ್ರಕ್ಕೆ ಒದಗಿಸಿದ್ದಾರೆ.