ಇಂದು`ಚಂದ್ರ` ದರ್ಶನ
Posted date: 27 Thu, Jun 2013 – 08:32:04 AM

ಇಂಡಿಯಾ ಕ್ಲಾಸಿಕ್ ಆರ್ಟ್ ಸಂಸ್ಥೆ ನಿರ್ಮಿಸಿರುವ, ರೂಪಅಯ್ಯರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ‘ಚಂದ್ರ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಪ್ರೇಂ(ನೆನಪಿರಲಿ) ಈ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ದಕ್ಷಿಣಭಾರತದ ಖ್ಯಾತ ನಟಿ ಶ್ರೇಯಾಶರಣ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವಿವೇಕ್, ಶ್ರೀನಾಥ್, ಗಣೇಶ್‌ವೆಂಕಟರಾಮನ್, ಧರ್ಮ, ಸಾಧುಕೋಕಿಲಾ, ಎಂ.ಎನ್.ಲಕ್ಷ್ಮೀದೇವಿ, ದೀಪಅಯ್ಯರ್, ಸಾನಿಯಾ ಮುಂತಾದವರಿದ್ದಾರೆ.
ಗೌತಮ್‌ಶ್ರೀವತ್ಸರ ಸಂಗೀತವಿರುವ ‘ಚಂದ್ರನಿಗೆ ಪಿ.ಕೆ.ಎಚ್.ದಾಸ್ ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರೂಪಅಯ್ಯರ್, ಇಮ್ರಾನ್, ಹರ್ಷ ನೃತ್ಯ ನಿರ್ದೇಶನ ಹಾಗೂ ರೂಪಅಯ್ಯರ್ ಕಲಾನಿರ್ದೇಶನ ಈ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed