?ಜರಾಸಂಧ`ನ ಮಾತು
Posted date: 24/July/2011

  ಶ್ರೀಮಂತ್ರಾಲಯ ಕಂಬೈನ್ಸ್ ಲಾಂಛನದಲ್ಲಿ ಬಿ.ಬಸವರಾಜ್ ಹಾಗೂ ಬಿ.ಕೆ.ಗಂಗಾಧರ್ ನಿರ್ಮಿಸುತ್ತಿರುವ ‘ಜರಾಸಂಧ ಚಿತ್ರಕ್ಕೆ ವಿಜಯ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
     ಸಾಹಸ ಪ್ರಧಾನ ಈ ಚಿತ್ರದ ನಾಯಕನಾಗಿ ವಿಜಯ್ ಅಭಿನಯಿಸುತ್ತಿದ್ದಾರೆ. ಪ್ರಣಿತಾ ನಾಯಕಿಯಾಗಿರುವ ‘ಜರಾಸಂಧ ಚಿತ್ರದ ತಾರಾಬಳಗದಲ್ಲಿ ದೇವರಾಜ್, ರೂಪಾದೇವಿ, ಜೆ.ಕೆ, ರಂಗಾಯಣ ರಘು, ಸ್ವಯಂವರ ಚಂದ್ರು, ಚೇತನ್ ಮುಂತಾದವರಿದ್ದಾರೆ.
      ಶಶಾಂಕ್ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಚಾಲುಕುಡಿ ಜಲಪಾತ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಲಕ್ಷಾಂತರ ಜನ ಸೇರುವ ಮುಲ್ಕಿ ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರದ ವಿಶೇಷಗಳಲೊಂದು.
     ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಶೇಖರ್‌ಚಂದ್ರರ ಛಾಯಾಗ್ರಹಣವಿದೆ. ಅರ್ಜುನ್ ಸಂಗೀತ, ಶ್ರೀ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಹಾಗೂ ಅನಿಲ್ ಅವರ ನಿರ್ಮಾಣ ನಿರ್ವಹಣೆ ‘ಜರಾಸಂಧ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed