ರಾಜ್ ಮೂವೀ ಹೌಸ್ ಲಾಂಛನದಡಿಯಲ್ಲಿ ನಟ ನಿರ್ಮಾಪಕ ರಾಜ್ ನಿರ್ಮಿಸಿರುವ ``ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ`` ಚಿತ್ರವು ಯಾವುದೇ ಸದ್ದುಗದ್ದಲವಿಲ್ಲದೇ ತೆರೆಗೆ ಸಿದ್ಧವಾಗಿದ್ದು. ಈ ತಿಂಗಳ ಅಂತ್ಯದಲ್ಲಿ ಚಿತ್ರವು ರಾಜ್ಯದ್ಯಂತ ತೆರೆಕಾಣಲಿದೆ.
ಚಿತ್ರಕ್ಕೆ ಹಂಸಲೇಖ ಸಾಹಿತ್ಯ, ನಂದಿತಾ ಸಂಗೀತ, ಕುಮಾರ್ ಕೋಟಿಕೊಪ್ಪ ಸಂಕಲನವಿದ್ದು ಚಿತ್ರದ ಕಥೆ, ಚಿತ್ರಕಥೆ ಛಾಯಾಗ್ರಹಣ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ದಿನೇಶ್ಬಾಬು ಹೊತ್ತಿದ್ದಾರೆ.
ತಾರಾಗಣದಲ್ಲಿ ರಾಜ್, ಚೈತ್ರಾ, ಬಿರಾದಾರ್, ದರ್ಶನ್ (ಅವನು ಮತ್ತೇ ಶ್ರಾವಣಿ ಧಾರಾವಾಹಿ ಖ್ಯಾತಿ) ದೀಪಾ, ಸಂಗೀತಾ, ಮನ್ದೀಪ್ರಾಯ್, ಮನ್ಮೋಹನ್ ಸಿಂಗ್ ಮುಂತಾದವರಿದ್ದಾರೆ.