2 ಸ್ಟಾರ್ ಫ಼ಿಲಂಸ್ ಲಾಂಛನದಲ್ಲಿ ಕುಶಾಲ್ ಮಹಾಜನ್ ಹಾಗೂ ರಾಜ್ ಆನಂದ್ ಅವರು ನಿರ್ಮಿಸಿರುವ ‘ತ್ರಯ‘ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೃಷ್ಣ ಸಾಯ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಆರ್.ಕೆ.ಪ್ರತಾಪ್ ಅವರ ಛಾಯಾಗ್ರಹಣವಿದೆ. ಯತೀಶ್ ಮಹದೇವ್ ಸಂಗೀತ ನಿರ್ದೇಶನ, ವೆಂಕಟರಮಣನ್ ಸಂಕಲನ ಹಾಗೂ ನಾಗರಾಜ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂಯುಕ್ತ, ಶಂಕರ್ ಶ್ರೀಹರಿ, ರಜನಿ ಭಾರಧ್ವಾಜ್, ಮದನ್ ಗೌದ, ನೀತು ಬಾಲ, ನಿಮಿಷ, ಅಮೋಘ ರಾಹುಲ್ ಮುಂತಾದವರಿದ್ದಾರೆ.