ಮಂತ್ರಾಲಯ ಪ್ರಭುಗಳಾದ ಗುರು ಶ್ರೀರಾಘವೇಂದ್ರರ ಮಹಿಮೆಗಳನ್ನು ಸಾರುವ ‘ರಾಘವೇಂದ್ರ ಮಹಿಮೆ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇದೇ ಹದಿನೆಂಟರಿಂದ ದ್ವಿತೀಂii ಹಂತದ ಚಿತ್ರೀಕರಣ ಆರಂಭವಾಗಲಿದೆ.
ತೆಲುಗು ಹಾಗೂ ತಮಿಳಿನಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣಚಂದ್ರ ಈ ಚಿತ್ರದ ನಿರ್ದೇಶಕರು. ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ರವೀಂದ್ರ ಗೋಪಾಲ ಈ ಚಿತ್ರದ ನಾಯಕರೂ ಹೌದು. ವಿನೋದ್ ಆಳ್ವಾ, ಸತ್ಯಪ್ರಕಾಶ್, ಶ್ರೀಧರ್, ರೇಖಾ, ಧರ್ಮ, ಅಶ್ವಿನಿ ಮುಂತಾದವರ ಅಭಿನಯದ ಈ ಚಿತ್ರಕ್ಕೆ ಎಲ್.ಎನ್.ಸೂರ್ಯ ಸಂಭಾಷಣೆ ಬರೆದಿದ್ದಾರೆ. ಪ್ರಮೋದ್ಕುಮಾರ್ ಸಂಗೀತ ನೀಡಿದ್ದಾರೆ.