ಚಿತ್ರದ ಆರಂಭದಲ್ಲೇ ‘ಲೊಡ್ಡೆ’ ವಿಶೇಶದೊಂದಿಗೆ ಸುದ್ದಿ ಮಾಡಿದೆ. ಚಿತ್ರದ ಕಥಾ ನಾಯಕಿ ಆಕಾಂಕ್ಷ ಪುರಿ ಅವರು ಹಗಲು ರಾತ್ರಿ ಮಳೆಯಲ್ಲಿ ನೆನೆದು ಮಳೆ ಹಾಡುಗಳಿಗೆ ಜನಪ್ರಿಯವಾದ ಜನಪ್ರಿಯ ಲೇಖಕ ಜಯಂತ್ ಕಾಯ್ಕಿಣಿ ಅವರ ‘ಬಣ್ಣದ ಹೂವಿನ ಕೊಡೆಯನ್ನು ಬಿಚ್ಚಿದ ಗಿಡಗಳು ಮಳೆಯಲ್ಲಿ....ಎಂಬ ಹಾಡಿಗೆ ಮೈಸೂರು, ಕೆ ಆರ್ ಎಸ್, ಗಗನಚುಕ್ಕಿ ಭರಚುಕ್ಕಿ, ಬಲಮುರಿ, ಕೆ ಆರ್ ಎಸ್ ನಾರ್ತ್ ಬ್ಯಾಂಕ್ ಸ್ಥಳಗಳಲ್ಲಿ ಅಭಿನಯಿಸಿ ಶಬಾಷ್ ಎನಿಸಿಕೊಂಡು ಚಿತ್ರಕ್ಕೆ ಒಂದು ನವಿರಾದ ಕ್ಷಣಗಳನ್ನು ಮಾಡಿಕೊಟ್ಟಿದ್ದಾರೆ. ಇದೊಂದು ಸಂಪೂರ್ಣ ಮಳೆಯಲ್ಲೇ ಚಿತ್ರೀಕರಣವಾದ ಹಾಡು ನಾಯಕಿಯ ಸಹಕಾರವನ್ನು ಅಂತ್ಯಂತ ಸಂತೋಷದಿಂದ ನಿರ್ಮಾಪಕ ಮಂಜುನಾಥ್ ಅವರು ಕೊಂಡಾಡಿದರು.
ಈ ಒಂದು ಸುಂದರ ಗೀತೆಯನ್ನು ನೃತ್ಯ ನಿರ್ದೇಶನ ಮಾಡಿದವರು ತ್ರಿಭುವನ್ ಮಾಸ್ಟೆರ್ ಅವರು.
‘ಲೊಡ್ಡೆ’ ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಅವರ ಚಿತ್ರ. ಶಯ್ಯಾಜಿ ಶಿಂದೆ, ಗೋಪಿನಾಥ್ ಭಟ್ (ಬಾಬ್ಜಿ) ಹಾಗೂ ಇತರರು ಪಾತ್ರವರ್ಗದಲ್ಲಿ ಇರುವ ಚಿತ್ರ.
ತಿರುಮಲಾ ಡೆವಲಪರ್ಸ್ ಅರ್ಪಿಸುವ ಉಲ್ಲಾಸ್ ಸಿನೆಮಾದ ಪ್ರಥಮ ಕಾಣಿಕೆ ‘ಲೊಡ್ಡೆ’ ಕಥೆ ಹಾಗೂ ಸಂಭಾಷಣೆ ಎಂ ಎಸ್ ಶ್ರೀನಾಥ್ ಅವರದು. ಇವರು ರಾಂಬೋ ಹಾಗೂ ವಿಕ್ಟರಿ ಚಿತ್ರಗಳಿಗೆ ನಿರ್ದೇಶನ ಹಾಗೂ ಕಥೆ ಒದಗಿಸಿರುವವರು.
ಚಿತ್ರಕಥೆ ಹಾಗೂ ನಿರ್ದೇಶನವನ್ನು ಎಸ್ ವಿ ಸುರೇಶ್ ಅವರು ಮಾಡುತ್ತಿದ್ದಾರೆ. ಕಳೆದ ವಾರ ಮೈಸೂರಿನಲ್ಲಿ ಪ್ರಾರಂಭವಾದ ಚಿತ್ರಕ್ಕೆ ಶಾರದ ಮಂಜು ಅವರು ಕ್ಯಾಮರಾ ಚಾಲನೆ ಮಾಡಿರುವರು, ಮಾಸ್ಟೆರ್ ಉಲ್ಲಾಸ್ ಚಿತ್ರಕ್ಕೆ ಕ್ಲಾಪ್ ಮಾಡಲಾಯಿತು.