ಅಕ್ಷಯ ತೃತೀಯದ ಮುನ್ನ ದಿನ ‘ರೀವೈಂಡ್‘ ಚಿತ್ರಕ್ಕೆ ಚಾಲನೆ
Posted date: 08 Wed, May 2019 – 09:58:34 AM

ಡಾ||ಶಿವರಾಜಕುಮಾರ್ ಅವರ ಆಶೀರ್ವಾದದೊಂದಿಗೆ, ವಿನೋದ್ ಅವರು ನಿರ್ಮಿಸುತ್ತಿರುವ  ‘ರೀವೈಂಡ್‘ ಚಿತ್ರದ ಮುಹೂರ್ತ ಸಮಾರಂಭ ಅಕ್ಶಯ ತೃತೀಯದ ಮುನ್ನದಿನ ಎಲೆಕ್ಟ್ರಾನಿಕ್ ಸಿಟಿಯ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ದೇವರ ಮೇಲೆ ಸೆಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ಸರು ಅವರು ಆರಂಭ ಫಲಕ ತೋರಿದರು. ಆಕಾಶ್ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರತಂಡ ಸದಸ್ಯರು ಈ ಸುಸಂದರ್ಭಕ್ಕೆ ಸಾಕ್ಷಿಯಾದರು.

ಈ ಹಿಂದೆ ಕೊಂಜಂ ವೆಯಿಲ್ ಕೊಂಜಂ ಮಾಜೈ, ಕಾದಲಿಕ್ಕಿ ಮರಣಂ ಇಲೈ ಸೇರಿಂದಂತೆ ತಮಿಳಿನ ಕೆಲವು ಚಿತ್ರಗಳಲ್ಲಿ  ನಟಿಸಿ ಜನಮನ ಸೆಳೆದಿದ್ದ ತೇಜ್‌ರವರು ‘ರೀವೈಂಡ್‘ ಚಿತ್ರದ ನಿರ್ದೇಶನ ಹಾಗೂ ನಟನೆ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಸಿಂಧೂರ‘ ಧಾರಾವಹಿ ನಟಿ ಚಂದನ ರಾಘವೇಂದ್ರ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಕೆ.ಜಿ.ಎಫ಼್‘ ಖ್ಯಾತಿಯ ಸಂಪತ್‌ಕುಮಾರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರರಾಜ್, ಮಂಡ್ಯ ರವಿ, ಆನಂದ್, ಸಂದೀಪ್ ಮಲಾನಿ, ವಿಕಾಸ್ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚೈನಾದ ಖ್ಯಾತ ಖಳನಟನೊಂದಿಗೆ ಪ್ರಮುಖ ಖಳನಾಯಕನ ಪಾತ್ರಕ್ಕೆ ಮಾತುಕಥೆ ನಡೆಯುತ್ತಿದೆ.

ವಿಭಿನ್ನ ಶೀರ್ಷಿಕೆಯಿರುವ ಈ ಸಿನಿಮಾ ಮನೆಮಂದಿ ಕೂತು ನೋಡುವಂತಹ ಒಂದು ಸೈಂಟಿಫ಼ಿಕ್ ಫ಼ಿಕ್‌ಷನ್ ಆಗಿರುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.  
ಸಬೀಶ್ ಸೊಲೋಮನ್ ಅವರ ಸಂಗೀತ ನಿರ್ದೇಶನ ಪ್ರೇಮ್ ಛಾಯಾಗ್ರಹಣ ಹಾಗೂ ವಿನೋದ್ ಬಸವರಾಜ್ ಅವರ ಸಂಕಲನ ಈ ಚಿತ್ರಕ್ಕಿದೆ. ಅನನ್ಯ ಭಟ್ ತಮ್ಮ ಮಧುರವಾದ ಧನಿಯಿಂದ ಮನರಂಜಿಸಲಿದ್ದಾರೆ.

ಪ್ರತಿ ಹತ್ತು ನಿಮಿಷಕ್ಕೊಮ್ಮೆ ಕಥೆಯನ್ನು ಭೂತಕಾಲ ಹಾಗೂ ವರ್ತಮಾನ ಕಾಲದ ನಡುವೆ ಹೆನೆಯಲಾಗಿದೆ. ದ್ವಿಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ರೀವೈಂಡ್ ಚಿತ್ರವನ್ನು ಲೂಥೇನಿಯಾ, ಜರ್ಮನ್, ಸಿಂಗಾಪುರ್ ಹಾಗೂ ಬೆಂಗಳೂರಿನಲ್ಲಿ ಚಿತ್ರಿಸಲಾಗುವುದು.  


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed