ಆಲಮಟ್ಟಿ ಸುತ್ತಮುತ್ತ ಬೆಟ್ಟದ ದಾರಿ ಹಾಡುಗಳ ಚಿತ್ರೀಕರಣ
Posted date: 10 Thu, May 2018 – 01:14:25 PM
ಹೀರಾಲಾಲ್ ಮೂವೀಸ್ ಲಾಂಛನದಲ್ಲಿ ಚಂದ್ರಕಲಾ ಟಿ.ಆರ್. ಹಾಗೂ ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ  ಬೆಟ್ಟದ ದಾರಿ ಚಿತ್ರಕ್ಕೆ ಇತ್ತೀಚೆಗೆ ಆಲಮಟ್ಟಿ, ದೇವರ ಉಪ್ಪರಗಿ, ಉತ್ನಾಳ್, ಇಂಗಳೇಶ್ವರ, ಸುತ್ತಮುತ್ತ ಬೆಳ್ಳಕ್ಕಿ ಸಾಲಂತೆ ಹಾರಾಡೋ ಆಸೆ ಈಗ, ಬದುಕೇ ಕಸಿದ ಪಾಪಿ ನೀನ್ಯಾರೋ ಎಂಬ ಹಾಡುಗಳೊಂದಿಗೆ ಒಟ್ಟು  ೪ ಹಾಡುಗಳನ್ನು ಚಿತ್ರೀಕರಿಸಿ ಕೊಳ್ಳಲಾಯಿತು. ಇದರೊಂದಿಗೆ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು,  ಇದೀಗ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. 
     ಮಾ. ಚಂದ್ರು ಕಥೆ - ಚಿತ್ರಕಥೆ ಸಂಭಾಷಣೆ ಬರೆದು  ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ   ನಂದ ಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಅರ್ಜುನ್ (ಕಿಟ್ಟಿ) ಸಂಕಲನ, ಡಾ. ವಿ. ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಹಾಗೂ ವಿಜಯ್ ಭರಮ ಸಾಗರ ಸಾಹಿತ್ಯವಿದೆ. ಮಾಸ್ಟರ್ ನಿಶಾಂತ್ ಟಿ. ರಾಥೋಡ್, ಮಾಸ್ಟರ್ ರಂಗನಾಥ್ ಯಾದವ್, ಮಾಸ್ಟರ್ ರೋಹಿತ್, ಮಾಸ್ಟರ್ ವಿಘ್ನೇಶ್, ಬೇಬಿ ಮಾನ್ಯತಾ ಎಂ. ನಾಯಕ್,  ಮನ್ ದೀಪ್ ರಾಯ್, ರಮೇಶ್ ಭಟ್, ಉಮೇಶ್,  ಮೈಸೂರ್ ಮಲ್ಲೇಶ್, ಆರ್. ನಾಗೇಶ್, ರಿಕ್ಕಿ, ಅಂಜಲಿ, ಮಂಜುಳಾ ರೆಡ್ಡಿ, ಮುಂತಾದವರ ತಾರಾಬಳಗವಿದೆ. 

 
 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed