ಡಿ.ಜೆ. ಎಂಟರ್ಟೈನ್ಮೆಂಟ್ ಬ್ಯಾನರ್ ಲಾಂಛನದಲ್ಲಿ ಧನಂಜಯ ಅತ್ರೆ ನಿರ್ಮಿಸುತ್ತಿರುವ ಕರ್ಷಣಂ ಚಿತ್ರದ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ. ಕಳೆದ ವಾರ ಸ್ಲಂ ಒಂದರಲ್ಲಿ ಒಂಬಾಳೆ ಕಟ್ಟು ಗುರು, ಚಪ್ಪಾಳೆ ತಟ್ಟು ಗುರು ಎಂದು ಆರಂಭವಾಗುವ ನಾಯಕನ ಇಂಟ್ರಡಕ್ಷನ್ ಸಾಂಗಿನೊಂದಿಗೆ ಈ ಚಿತ್ರದ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆಯಲಾಯಿತು. ಮಹಾಭಾರತ ಧಾರವಾಹಿ ಖ್ಯಾತಿಯ ನಿರ್ದೇಶಕ ಶರವಣ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಲೇಖ ಧಾರವಾಹಿಯ ನಟ ಧನಂಜಯ ಅತ್ರೆ ಇದೇ ಮೊದಲ ಬಾರಿಗೆ ನಾಯಕನಟನಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗಾಯಕ ಹೇಮಂತ್ಕುಮಾರ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಒಟ್ಟು ೪ ಹಾಡುಗಳಿವೆ.
ಚಿತ್ರಕ್ಕೆ ಮೋಹನ್ ಎಂ.ಮುಗುಡೇಶ್ವರ ಛಾಯಾಗ್ರಹಣ, ಹೇಮಂತ್ ಸಂಗೀತ ನಿರ್ದೇಶನ, ಡಾ|| ಬಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಗೌರಿ ಅತ್ರೆ ಕಥೆ, ವೆಂಕಟೇಶ್ ಸಂಕಲನ, ಗಿರೀಶ್ ನೃತ್ಯ ನಿರ್ದೇಶನ, ಅಶೋಕ್ ಸಾಹಸ, ವಸಂತರಾವ್ ಕುಲಕರ್ಣಿ ಕಲಾನಿರ್ದೇಶನವಿದೆ. ಧನಂಜಯ ಅತ್ರೆ, ಅನೂಷಾರೈ, ಶ್ರೀನಿವಾಸ ಮೂರ್ತಿ, ಮನಮೋಹನ್ ರೈ, ವಿಜಯ ಚಂಡೂರು, ಗೌತಮ್ ರಾಜ್, ಯಮುನಾ ಶ್ರೀನಿಧಿ, ಇನ್ನು ಮುಂತಾದವರ ತಾರಾಬಳಗವಿದೆ.