ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಮ ವಿಭಾಗದಲ್ಲಿ ಪ್ರದರ್ಶನಗೊಂಡ ‘ರಂಗನಾಯಕಿ VOL-1
Posted date: 28 Thu, Nov 2019 – 11:19:54 AM

ಎಸ್.ವಿ.ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಎಸ್.ವಿ.ನಾರಾಯಣ್ ಅವರು ನಿರ್ಮಿಸಿರುವ ‘ಹಾಗೂ ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ vol 1‘ ಚಿತ್ರ ಗೋವಾ ಅಂತರರಾಷ್ತ್ರೀಯ ಚಲನಚಿತ್ರೋತ್ಸವ(2019)ದ ಇಂಡಿಯನ್ ಪನೋರಮ ವಿಭಾಗದಲ್ಲಿ ಇಂದು(ನವಂಬರ್ ೨೪)ರಂದು ಪ್ರದರ್ಶನಗೊಂಡಿದೆ. ನಿಮಾಪಕ ಎಸ್.ವಿ.ನಾರಾಯಣ್, ನಿರ್ದೇಶಕ ದಯಾಳ್ ಪದ್ಮನಾಭನ್, ನಟ ಎಂ.ಜಿ.ಶ್ರೀನಿವಾಸ್(ಶ್ರೀನಿ), ನಟಿ ಅದಿತಿ ಪ್ರಭುದೇವ, ಸಂಗೀತ ನಿರ್ದೇಶಕ ಮಣಿಕಾಂತ

ಕದ್ರಿ, ಅವಿನಾಶ್ ಯು ಶೆಟ್ಟಿ  ಸೇರಿದಂತೆ ಚಿತ್ರತಂಡದ ಸದಸ್ಯರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಈ ವರ್ಷ ‘ಗೋಲ್ಡನ್ ಜ್ಯೂಬಿಲಿ ಎಡಿಷನ್ ಆಫ಼್ ದಿ ಫ಼ೆಸ್ಟಿವಲ್‘ ಆಗಿದ್ದು ಈ ಸಮಯದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಚಿತ್ರ  ‘ರಂಗನಾಯಕಿ vol 1‘ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ತಿಳಿಸಿದ್ದಾರೆ.

ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ರಾಕೇಶ್ ಅವರ ಛಾಯಾಗ್ರಹಣವಿದೆ. ಸುನೀಲ್ ಕಶ್ಯಪ್ ಸಂಕಲನವಿರುವ ಈ ಚಿತ್ರಕ್ಕೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಅದಿತಿ ಪ್ರಭುದೇವ, ಎಂ.ಜಿ.ಶ್ರೀನಿವಾಸ್(ಶ್ರೀನಿ), ತ್ರಿವಿಕ್ರಮ್, ಶಿವಾರಾಂ, ಸುಚೇಂದ್ರಪ್ರಸಾದ್, ಸುಂದರ್, ವೀಣಾ ಸುಂದರ್, ಶೃತಿ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed