ಉದಯ ಟಿವಿಯಲ್ಲಿ ಪ್ರಿಮೀಯರ್ ಚಲನಚಿತ್ರ ಟಗರು ಗಣೇಶ ಹಬ್ಬದ ವಿಶೇಷ ಇದೇಗುರುವಾರ(13.09.2018) ಸಂಜೆ೭ಕ್ಕೆ
ಇದೇಗಣೇಶ ಹಬ್ಬದ ದಿನದಂದು ಉದಯ ಟಿವಿಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಅಭಿನಯದ "ಟಗರು" ಚಲನಚಿತ್ರ ಸಂಜೆ ೭ಕ್ಕೆ ಪ್ರಸಾರವಾಗಲಿದೆ. ಈ ಚಿತ್ರವನ್ನುದುನಿಯಾ ಸೂರಿ ನಿರ್ದೇಶಿಸಿದ್ದು, ಕೆ.ಪಿ.ಶ್ರೀಕಾಂತ್ ಅವರು ನಿರ್ಮಿಸಿದ್ದಾರೆ.ಟಗರುಚಿತ್ರದಲ್ಲಿ ಶಿವರಾಜ್ ಕುಮಾರ್, ದೇವರಾಜ್, ಧನಂಜಯ್, ವಶಿಷ್ಠ ಎನ್.ಸಿಂಹ, ಮನ್ವಿಥಾ, ಭಾವನ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್ರಾಜ್ರವರ ಸಂಗೀತ ನಿರ್ದೇಶನ ಮಾಡಿದ್ದಾರೆ.ಉತ್ತಮ ಛಾಯಾಗ್ರಹಣವನ್ನು ಮಹೇಂದ್ರ ಸಿಂಹ ಮಾಡಿರುತ್ತಾರೆ.
ಮೊದಲ ಬಾರಿಗೆ. ರಾಜ್ಯಾದ್ಯಾಂತ ಮಲ್ಟಿಪ್ಲೆಕ್ಸ್ನಲ್ಲಿ ಭರ್ಜರಿ ಪ್ರದರ್ಶನಗೊಂಡಚಿತ್ರಇದಾಗಿದೆ.ಟಗರು ಚಿತ್ರವು ಕೀನ್ಯಾ ಮತ್ತು ಜಪಾನ್ ದೇಶಗಳಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಲನಚಿತ್ರವೆಂದು ವರದಿಯಾಗಿದೆ.ಈ ಚಲನಚಿತ್ರವು 15 ಕೇಂದ್ರಗಳಲ್ಲಿ ಯಶಸ್ವಿಯಾಗಿ 100 ದಿನಗಳ ಪೂರ್ಣಗೊಂಡಿತು.
ಪೊಲೀಸ್ ಅಧಿಕಾರಿಯಾಗಿದ್ದ ಶಿವಣ್ಣ ಗೋವಾದಿಂದ ಒಂದು ಹುಡುಗಿ(ಮಾನ್ವಿಥಾ) ಕರೆದುಕೊಂಡು ಬರುತ್ತಾನೆ.ಬರುವ ದಾರಿಯಲ್ಲಿ ಇಬ್ಬರು ಅವರವರ ಹಿಂದಿನ ಸಿಹಿ-ಕಹಿ ಘಟನೆಗಳನ್ನು ನೆನಸಿಕೊಳ್ಳುತ್ತಾರೆ.ಹೀರೋಯಿನ್ ಮಾನ್ವಿಥಾ ಶಿವಣ್ಣನ್ನು ಪ್ರೀತಿಸುತ್ತಾಳೆ. ಅಕ್ಕ (ಬಾವನ) ವಿಲನ್ಗಳಿಂದ ಹತ್ಯಗೊಂಡಿರುವ ವಿಷಯ ಮಾನ್ವಿತಾಗೆ ತಿಳಿದಿರುವುದಿಲ್ಲಾ. ವಿಲನ್ ಪಾತ್ರದಲ್ಲಿ ಮಿಂಚಿರುವಡಾಲಿ ಧನಂಜಯ ಶಿವನ ಏಕೆ ವಿರುದ್ಧವಾಗುತ್ತಾನೆ? ಶಿವ ಎಂಬ ಖಡಕ್ ಅಧಿಕಾರಿ ಸಮಾಜದಲ್ಲಿರುವ ಕೆಟ್ಟವರನ್ನು ಹೇಗೆ ಮಟ್ಟ ಹಾಕುತ್ತಾನೆಎಂಬುದೇ ಈ ಚಿತ್ರದಕಥೆ.