ಖ್ಯಾತ ನಿರ್ದೇಶಕ, ಟೆಂಟ್ ಸಿನಿಮಾ ನಟನ ಶಾಲೆ ಸ್ಥಾಪಕ ಹಾಗೂ ಪ್ರಸ್ತುತ ಕರ್ನಾಟಕ ಚಲನಚಿತ್ರ ಅಕಾಡಮಿಯ ಅಧ್ಯಕ್ಷರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ೨೦೧೭ರ ಜುಲೈ ಬ್ಯಾಚ್ನ ವಿದ್ಯಾರ್ಥಿಗಳಾದ ಅನುರಾಗ್, ನೌಷಾದ್, ರವಿತೇಜ ಹಾಗೂ ಪ್ರಜ್ವಲ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರವೊಂದು ಆಗಸ್ಟ್ ೧೫ರಿಂದ ಆರಂಭವಾಗಲಿದೆ.
ಮಂಜು ಸ್ವರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಗಣಪ ಕ್ರಿಯೇಷನ್ಸ್ ಪ್ರೈ ಲಿ ಲಾಂಛನದಲ್ಲಿ ಶ್ರೀಮತಿ ಸತ್ಯಭಾಮ ಅವರು ನಿರ್ಮಿಸುತ್ತಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಅಭಿಮಾನ್ ರೈ ಸಂಗೀತ ನೀಡುತ್ತಿದ್ದಾರೆ. ಸುರೇಶ್ ಬಾಬು ಅವರ ಛಾಯಾಗ್ರಹಣವಿರುವ ಈ ಚಿತ್ರದ ಚಿತ್ರೀಕರಣ ನಲವತ್ತು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ನಡೆಯಲಿದೆ. ಸಿನಿಮಾದೊಳಗೊಂದು ಸಿನಿಮಾ ಕಥೆಯುಳ್ಳ ಕಥಾಹಂದರ ಈ ಚಿತ್ರ ಹೊಂದಿದೆ.