ಕರ್ನಾಟಕದ ಹೆಮ್ಮೆಯ ಕುವರ, ಸಾಹಿತಿ, ಸುಸಂಪನ್ನ, ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ನಮ್ಮ-ನಿಮ್ಮೆಲ್ಲರ ನೆಚ್ಚಿನ, ಅಚ್ಚು-ಮೆಚ್ಚಿನ ಜನಪದ ವಿದ್ವಾಂಸ, ದೇಸಿ ನೆಲೆಗಟ್ಟಿನ ಹಿರಿಯ ಕವಿ ಡಾ|| ಚಂದ್ರಶೇಖರ್ ಕಂಬಾರ ಅವರನ್ನು ಈ ಸಂದರ್ಭದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಉಪಾಧ್ಯಕ್ಷರಾದ ಹೆಚ್.ಕೆ.ಲಕ್ಷ್ಮೀನಾರಾಯಣ ಅಡಿಗ, ಸು.ರುದ್ರಮೂರ್ತಿ ಶಾಸ್ತ್ರಿ, ಕಾರ್ಯದರ್ಶಿ ಸೀತಾರಾಮ ಹೆಗಡೆ, ಸಂಘಟನಾ ಕಾರ್ಯದರ್ಶಿ ಕೆ.ಎಸ್.ಮುರಳಿ, ಜಂಟಿ ಕಾರ್ಯದರ್ಶಿ ಎಸ್.ಜಿ.ಮಾಲತಿಶೆಟ್ಟಿ, ಖಜಾಂಚಿ ವಿ.ಹೇಮಂತ್ಕುಮಾರ್, ಸದಸ್ಯರಾದ ಬಿ.ಕೆ. ನಂಜುಂಡಪ್ಪ, ಶರಣು ಹುಲ್ಲೂರು, ರಾಜಾ ಚೆಂಡೂರು, ಎಫ್.ಎಸ್.ದುರಗಣ್ಣನವರ, ಪಿ.ಸತೀಶ್, ಎಲ್.ಎನ್.ಸುನೀಲ್, ಬಿ.ಜಿ ಸತ್ಯಮೂರ್ತಿ, ಬಿ.ಸಿ.ಸತೀಶ್ ಹಾಗೂ ಅನೇಕ ಸದಸ್ಯರು ಹಾಜರಿದ್ದರು.