ಶ್ರೀ ಸ್ವರ್ಣಾಂಭ ಫಿಲಂಸ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ನನ್ನ ಪ್ರೀತಿಯ ತಂಗಿ ಚಿತ್ರಕ್ಕೆ ಕಳೆದವಾರ ರೇಣು ಡಿಜಿ ಸ್ಟುಡಿಯೋದಲ್ಲಿ ಮುಕ್ಕಣ್ಣ ನಿನಗೇಕೆ ಮೂರು ಕಣ್ಣು ಕೊಡು ನನಗೆ ಸಾಕು ಒಂದು ಕಣ್ಣು ಹಾಗೂ ಮುಂಜಾನೆಯಲ್ಲಿ ಕೋಳಿ ಕೂಗಿದಾಗ ಬಾನಲ್ಲಿ ಸೂರ್ಯ ಎಚ್ಚೆತ್ತು ಹೊರ ಬಂದಹಾಗೆ ಎಂಬ ಹಾಡುಗಳೊಂದಿಗೆ ಒಟ್ಟು ೭ ಹಾಡುಗಳಿಗೆ ಅಜಯ್ ವಾರಿಯಾರ್, ಹೇಮಂತ, ಅನುರಾಧ ಭಟ್ ಹಾಡಿದ್ದು, ಗಂದರ್ವ ಅವರ ಸಂಗೀತ ನಿರ್ದೇಶನದಲ್ಲಿ ಧ್ವನಿ ಮುದ್ರಿಸಿಕೊಳ್ಳಲಾಯಿತು.
ಫೆಬ್ರವರಿ ಮೊದಲ ವಾರ ಮೈಸೂರಿನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಈ ಹಿಂದೆ ನಂಜುಂಡೇಶ್ವರ ಮಹಿಮೆ ಹಾಗೂ ರೈತನ ರಕ್ತ ಚಿತ್ರವನ್ನು ನಿರ್ಮಿಸಿದ್ದ ಪಿ.ಶ್ರೀನಿವಾಸ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಹದೇವ್ ಛಾಯಾಗ್ರಹಣ, ಕಪಿಲ್ ನೃತ್ಯ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂದೇಶ್, ತಾವರೆ, ನವ್ಯ, ಡಿಂಗ್ರಿ ನಾಗರಾಜ್, ಬಿರಾದರ್, ಆಯ್ಕೆಯಾಗಿದ್ದು ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.