ದೇವನಗರಿ ಸ್ಟುಡಿಯೋಸ್ ಲಾಂಛನದಲ್ಲಿ ರಂಜಿತ್ ಗೌಡ.ಕೆ, ನಿರ್ಮಾಣದ ದೃಗಾಂತರ ಚಿತ್ರದ ಚಿತ್ರೀಕರಣ ನೆಲಮಂಗಲದ ಬಳಿ ಇರುವ ಸೊಂಡೇಕೊಪ್ಪ ಕ್ರಾಸ್ನಲ್ಲಿ ಶೋಭರಾಜ್, ಹಾಗೂ ಇತರ ಕಲಾವಿದರು ಪಾಲ್ಗೊಂಡಿದ್ದ ದೃಶ್ಯಗಳು ಚಿತ್ರೀಕರಣವಾದವು. ಎಸ್.ಪಿ.ಕೃಷ್ಣಪ್ಪ ಕ್ಲಾಪ್ ತೋರಿದಾಗ ಧನಲಕ್ಷ್ಮ.ಎನ್ ಕ್ಯಾಮೆರಾ ಚಾಲನೆ ಮಾಡಿ ಚಿತ್ರೀಕರಣಕ್ಕೆ ಅಣಿಮಾಡಿ ಕೊಟ್ಟರು. ಅಂಕಿತ್ ವಿ ಹೆಗಡೆ - ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಕಥೆ-ಗೌತಮ್ ಮೋಹನ್ ರಾಜ್, ಹಾಡುಗಳು - ಸನಿತ್ ಕುಮಾರ್, ನಾಗಾರ್ಜುನ್ ಶರ್ಮ, ಅಂಕಿತ್ ವಿ ಹೆಗಡೆ, ಛಾಯಾಗ್ರಹಣ - ಗೋವಿಂದರಾಜನ್, ಸಂಗೀತ-ಜಿ.ಆರ್. ರಾಯನ್, ಸಂಕಲನ-ಜಗದೀಶ್, ಕಲೆ-ಅನಿಲ್, ನಿರ್ದೇಶನ ಸಹಾಯ - ಎಸ್.ಶ್ರೀಚರಣ್, ಕಿರಣ್ ೪ಕೆ, ಗಣೇಶ್ ಎಲ್,ಲೋಹಿತ್, ದೀಪಕ್, ನಿರ್ಮಾಣ ನಿರ್ವಹಣೆ - ಕೆ.ಎಸ್. ಪ್ರಕಾಶ್, ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ತಾರಾಗಣದಲ್ಲಿ ರಂಜಿತ್ ಗೌಡ, ನಿಖಿತಾ ಸ್ವಾಮಿ, ಶೋಭರಾಜ್, ಲಕ್ಷ್ಮೀ ಭಟ್, ನಂದೀಶ್, ಸಂದೇಶ್ ಮುಂತಾದವರಿದ್ದಾರೆ