ನೋಡುಗರ ಮನ ಗೆಲುತ್ತಿದೆ `ಅದನೇನ್ ಕೇಳ್ತಿ`
Posted date: 02 Wed, Sep 2020 – 05:18:44 PM

ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ ಅವರು ನಿರ್ಮಿಸಿರುವ, ನಾಗೇಂದ್ರ ಅರಸ್ ನಿರ್ದೇಶಿಸಿರುವ 'ಅದನೇನ್ ಕೇಳ್ತಿ'  ಚಿತ್ರ ಆಗಸ್ಟ್  22 ರಂದು ವಿ ೪ ಸ್ಟ್ರೀಮಿಂಗ್

V4stream  ಓಟಿಟಿ ಮೂಲಕ ಬಿಡುಗಡೆಯಾಗಿ ಜನಮನಸೂರೆಗೊಂಡಿದೆ.

16 ಸನ್ನಿವೇಶಗಳ ಚಿತ್ರೀಕರಣ ಕೇವಲ ನಾಲ್ಕು ವರೆ ದಿನಗಳಲ್ಲಿ ಮುಕ್ತಾಯವಾಗಿರುವುದು ವಿಶೇಷ   ಮನೋರಂಜನಾ ಪ್ರಧಾನವಾಗಿರುವ ಈ ಚಿತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ ಎನ್ನುತ್ತಾರೆ ನಾಗೇಂದ್ರ ಅರಸ್.

ನಿರ್ದೇಶಕರೆ ಕಥೆ ಬರದು ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಎಂ.ಬಿ ಅಳಿಕಟ್ಟಿ ಛಾಯಾಗ್ರಹಣ ಹಾಗೂ ಸೇನಾಪತಿ ಅವರ ಸಂಗೀತ ಈ ಚಿತ್ರಕ್ಕಿದೆ.

ನಿರಂಜನ್ ದೇಶಪಾಂಡೆ, ಪ್ರವೀಣ್ ಕುಮಾರ್ (ಕಾಮಿಡಿ ಕಿಲಾಡಿಗಳು), ಅನಿಲ್ ಯಾದವ್, ಹ್ಯಾರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.



Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed