ಇಂಡಿಯನ್ ಫಿಲಂ ಇಂಡಸ್ಟ್ರೀಸ್ ಲಾಂಛನದಲ್ಲಿ ಶೈಕ್ ಮುಕ್ತಿಯಾರ್ ಕಥೆ ಬರೆದು ನಿರ್ಮಿಸುತ್ತಿರುವ ಜನುಮದ ಸ್ನೇಹಿತರು ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಇದೀಗ ಸೆನ್ಸಾರ್ ಮನೆಯಲ್ಲಿದೆ. ಚಿತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಒಂದೇ ಎಂಬ ಸಂದೇಶ ಸಾರುವ ಹಾಗೂ ಫ್ಯಾಕ್ಟರಿಯಲ್ಲಿ ಕಾರ್ಮಿಕ, ಮಾಲೀಕನ ಸುತ್ತ ಮುತ್ತ ನಡೆಯುವ ಕಥಾಹಂದರವಿರುವ ಈ ಚಿತ್ರವನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಪರುಶುರಾಮ್ ನಾವಳ್ಳಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೃಷ್ಣಸಾರಥಿ ಛಾಯಾಗ್ರಹಣ, ಎ.ರಾಜ್ ಕುಮಾರ್ ಸಂಗೀತ, ಶ್ರೀಧರ್ ಶೆಟ್ಟಿ ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನ, ಜಗ್ಗು ನೃತ್ಯ ನಿರ್ದೇಶನ ಸುಪ್ರಿತ್ ಶಂಕರ್ ಸಂಕಲನ, ಶೈಕ್ ಸದ್ದಾಮ್ ಭಾಷ ಕಾರ್ಯಕಾರಿ ನಿರ್ಮಾಪಕರಾಗಿದ್ದು. ಶೈಕ್ ಮುಕ್ತಿಯಾರ್, ರೋಹಿತ್ ಶೆಟ್ಟಿ, ಅಂಗಾರಿಕ, ಶ್ರೀಧರ್ ಶೆಟ್ಟಿ, ಮೂಗು ಸುರೇಶ್, ರವಿ, ಹರೀಶ್, ದೇವರಾಜ್, ನವೀನ್, ಪ್ರಭಾಕರ್, ವಿನೋದ್ ಇನ್ನೂ ಮುಂತಾದವರ ತಾರಾಬಳಗವಿದೆ.