ಬಹಳ ವರ್ಷಗಳ ನಂತರ ಶಿವರಾಜ್ಕುಮಾರ್ ಮತ್ತೆ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ರೌಡಿಸಂ, ಆಕ್ಷನ್ ಚಿತ್ರಗಳಲ್ಲೇ ಅಭಿನಯಿಸುತ್ತಿದ್ದ ಶಿವಣ್ಣ ಸ್ವಲ್ಪ ಚೇಂಜ್ ಆಗಲಿದ್ದಾರೆ. ಅವರನ್ನು ಈ ರೀತಿ ಪ್ರೊಜೆಕ್ಟ್ ಮಾಡುವ ಕೆಲಸಕ್ಕೆ ಕೈಹಾಕಿರುವವರು ನಿರ್ದೇಶಕ ಆರ್. ಅನಂತರಾಜು. ಕೊಠಾರಿ ಎಂಟರ್ಪ್ರೈಸಸ್ ಲಾಂಛನದಲ್ಲಿ ಚನ್ನಪಟ್ಟಣ ರಾಜೇಂದ್ರ (ರಾಜಣ್ಣ) ನಿರ್ಮಿಸುವ ಈ ಚಿತ್ರಕ್ಕೆ ಸೂಕ್ತವಾದ ಶೀರ್ಷಿಕೆ ಸಿಕ್ಕಿಲ್ಲ. ನಾಯಕಿಗಾಗಿ ಶೋಧ ನಡೆದಿದ್ದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಹೊಸ ವರ್ಷದ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ ನಿರ್ದೇಶಕ ಅನಂತರಾಜು. ಸವಾರಿ ಖ್ಯಾತಿಯ ಮಣಿಕಾಂತ್ ಕದ್ರಿಯ ಸಂಗೀತ ಸಂಯೋಜನೆ ತಾರಾಪತಿ ಹೆಚ್.ಸಿ. ವೇಣು ಛಾಯಾಗ್ರಹಣ ಮಾಡಲಿದ್ದಾರೆ. ಹೆಚ್ಚಾಗಿ ಲವ್ಸ್ಟೋರಿಗಳಲ್ಲೇ ಅಭಿನಯಿಸುತ್ತಿದ್ದ ಶಿವರಾಜ್ಕುಮಾರ್ ಇತ್ತೀಚೆಗೆ ಆಕ್ಷನ್ ಚಿತ್ರಗಳಿಗೆ ಬ್ರಾಂಡ್ ಆಗಿದ್ದರು. ಅವರನ್ನು ಮತ್ತೆ ಹಳೇ ಶಿವರಾಜ್ಕುಮಾರ್ ಆಗಿ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ದೊರೆಯಲಿದೆ.