ರಾಕಿನ್ ಪ್ರೊಡಕ್ಷನ್ ಲಾಂಛನದಲ್ಲಿ ಶ್ರೀಮತಿ ಶಬೀನಾ ಅರಾ ಹಾಗೂ ಕಿಂಗ್ ಲಿಂಗರಾಜು ನಿರ್ಮಿಸುತ್ತಿರುವ ಮನಸ್ಸಿನ ಮರೆಯಲಿ ಚಿತ್ರಕ್ಕೆ ಕಳೆದ ವಾರ ಬನಶಂಕರಿಯಲ್ಲಿರುವ ಶ್ರೀ ಸಾಯಿ ಸ್ಟುಡಿಯೋದಲ್ಲಿ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಇದೇ ತಿಂಗಳ ಕೊನೆಯವಾರದಲ್ಲಿ ಸಿ.ಡಿ. ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಈ ಹಿಂದೆ ಆಸ್ಕರ್, ಮಿಸ್ ಮಲ್ಲಿಗೆ, ಮೋನಿಕಾ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪವನ್ ಕುಮಾರ್ ಛಾಯಾಗ್ರಹಣ, ತ್ಯಾಗರಾಜ್ ಸಾಹಿತ್ಯ ಮತ್ತು ಸಂಗೀತ, ಎ.ಆರ್. ಸಾಯಿರಾಂ ಚಿತ್ರಕಥೆ, ಸಂಭಾಷಣೆ, ಹರೀಶ್ ಗಿರಿಗೌಡ ಸಂಕಲನ, ಸ್ಟಾರ್ ನಾಗಿ ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸವಿದೆ. ಕಿಶೋರ್ ಯಾದವ್, ದಿವ್ಯಗೌಡ, ಗುರುರಾಜ್ ಭೂಪಾಲ್, ರಾಜ್ ಪುಷ್ಪಾ ಶುಕ್ಲ, ಭಗವತ್, ವರ್ಧನ್ ತೀರ್ಥಹಳ್ಳಿ, ಮಾಸ್ಟರ್ ರಾಕಿನ್, ಪ್ರಿಯಾಂಕ, ನಂದಗೋಪಾಲ್, ಸಂದೀಪ್ ಮುಲಾನಿ, ಶಿವು ಮಂಗಳೂರು, ವಠಾರ ಮಲ್ಲೇಶ್ ಮುಂತಾದವರ ತಾರಾಬಳಗವಿದೆ.