ಮಾತಿನ ಮರುಲೇಪನ ಮುಗಿಸಿದ ಸಾರ್ವಜನಿಕ ...!
Posted date: 06 Thu, Jun 2019 – 06:12:52 PM

ಕಳೆದ ವರ್ಷ ಯಶಸ್ವೀ (ಗುಲ್ಟು) ಚಿತ್ರ ನಿರ್ಮಿಸಿದ ವಿವಿಧ್ ಫಿಲಂಸ್ ಲಾಂಛನದಡಿಯಲ್ಲಿಶ್ರೀ ದೇವರಾಜ್.ಆರ್, ಪ್ರಶಾಂತ್‌ರೆಡ್ಡಿ.ಎಸ್, ಜನಾರ್ಧನ್‌ಚಿಕ್ಕಣ್ಣ ನಿರ್ಮಿಸುತ್ತಿರುವಸಾರ್ವಜನಿಕರಿಗೆ ಸುವರ್ಣ ಅವಕಾಶಚಿತ್ರದ ಮಾತಿನ ಮರುಲೇಪನಕಾರ್ಯ ಬಾಲಾಜಿ ಸ್ಟುಡಿಯೋವಿನಲ್ಲಿ ಕಳೆದ ವಾರ ಮುಕ್ತಾಯಗೊಂಡಿತು.

ಚಿತ್ರಕ್ಕೆ ಮೂರುಗೀತೆ ಹಾಗೂ ಕ್ಲೈಮ್ಯಾಕ್ಸ್ ಸನ್ನಿವೇಶದಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಈ ತಿಂಗಳಲ್ಲೇ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆಜನಾರ್ಧನ್‌ಚಿಕ್ಕಣ್ಣ, ಹರಿಕೃಷ್ಣ ಸಂಭಾಷಣೆ, ವಿಘ್ನೇಶ್‌ರಾಜ್‌ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ, ಶಾಂತಕುಮಾರ್ ಸಂಕಲನ, ವರದರಾಜ್ ಕಲೆ, ಅಜರ್, ಶ್ರೀಧರ್ ನೃತ್ಯ, ಶಕ್ತಿ ಶರವಣನ್ ಸಾಹಸವಿದ್ದು, ಚಿತ್ರದಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನುಅನೂಪ್‌ರಾಮಸ್ವಾಮಿಕಶ್ಯಪ್ ಹೊತ್ತಿದ್ದಾರೆ.  

ಚಿತ್ರದಪ್ರಮುಖತಾರಾಗಣದಲ್ಲಿ ರಿಷಿ, ಧನ್ಯಬಾಲಕೃಷ್ಣ, ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣರಘು, ಶೀನು ಮಿತ್ರ, ಶಾಲಿನಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed