ಒಂದು ಚಿತ್ರಕ್ಕೆ ಶೀರ್ಷಿಕೆ ಎನ್ನುವುದು ತುಂಬ ಪ್ರಾಮುಖ್ಯವಾಗಿರುತ್ತದೆ. ಮನಸೆಳೆಯುವ ಶೀರ್ಷಿಕೆ ಇದ್ದರೆ ಕುತೂಹಲಕ್ಕಾದರೂ ಥಿಯೇಟರಿನತ್ತ ಬರುತ್ತಾರೆ. ಅದೇ ರೀತಿ ಈಗ ಮೈಸೂರ್ಸ್ಯಾಂಡಲ್ ಎಂಬ ಚಿತ್ರವೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಹೆಸರಘಟ್ಟ ರಸ್ತೆಯ ಬಾಗಲಗುಂಟೆ ಮಾರಮ್ಮ ದೇವಸ್ಥಾನದಲ್ಲಿ ನಡೆಯಿತು.
ರಾಜಪುರಿ (ಗುರುರಾಜ ಶಿವಮೊಗ್ಗ) ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ರಿಲೀಸ್ಗೆ ರೆಡಿಯಾಗಿರುವ ಸ್ಪಲ್ವ ಸಮಯದ ನಂತರ ಕರೆಮಾಡಿ ಎಂದ ಚಿತ್ರವನ್ನು ನಿರ್ದೇಶಿಸಿದ್ದ ರಾಜಪುರಿ ಅವರ ಎರಡನೆ ಚಿತ್ರವಿದು. ಸಿನಿಮಾ ರಂಗದಲ್ಲಿ ನಿರ್ದೇಶಕರಾಗಬೇಕೆಂದು ಬಂದು ಏನೆಲ್ಲಾ ಅನುಭವ ಪಡೆದರು ಎಂದು ನಾಯಕ ನಾಯಕಿಯ ಮೂಲಕ ನಿರ್ದೇಶಕರು ಹೇಳಲು ಪ್ರಯತ್ನಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ದೊಡ್ಡಬಳ್ಳಾಪುರ ಹಾಗೂ ಚಿಕ್ಕಮಗಳೂರು ಸುತ್ತಮುತ್ತ ಮೈಸೂರ್ ಸ್ಯಾಂಡಲ್ ಚಿತ್ರಕ್ಕೆ ಚಿತ್ರಕರಣ ನಡೆಯಲಿದೆ.
ಎನ್.ಎನ್. ಮೂವೀಸ್ ಅಂಡ್ ಜಿ.ಇ.ಎಂ. ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ಅಭಯ್ ಪಚ್ಪಾಂಡೆ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಛಾಯಾಗ್ರಹಣ, ಹರ್ಷಕೂಗೂಡು ಸಂಗೀತ, ದುರ್ಗ ಪಿ.ಎಸ್. ಸಂಕಲನ, ಅಪ್ಪುವೆಂಕಟೇಶ್ ಸಾಹಸ, ಶ್ರೀತೇಜ ಸಾಹಿತ್ಯ, ಕಂಬಿರಾಜು ನೃತ್ಯನಿರ್ದೇಶನವಿದೆ. ವಿಶಾಲ್ಕುಮಾರ್, ಮಹಿಮಾ, ಕುರಿ ಪ್ರತಾಪ್ (ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ), ಪ್ರಕಾಶ್, ದುರ್ಗಪ್ರಸಾದ್, ಶಾಂತಕುಮಾರ್, ಅರುಣ್, ಶಿವಾಸ್.ಕೆ.ಪಾಣಿ, ಸೀನಂ ಕುಮಾರ್ ಆಯ್ಕೆಯಾಗಿದ್ದು ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.